ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

Public TV
1 Min Read
FotoJet 3 15

ಬಾಲಿವುಡ್ ಸಿನಿಮಾಗಳ, ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಹಾಕಿದವರ ಮೇಲೆ ನಟ ಅರ್ಜುನ್ ಕಪೂರ್ ಗರಂ ಆಗಿದ್ದರು. ಇಂತಹ ಶಕ್ತಿಗಳನ್ನು ಬೆಳೆಯಲು ಬಿಡಬಾರದು, ಬೆಳೆಯುತ್ತಿರುವಾಗಲೇ ಕಿತ್ತು ಬೀಸಾಕಬೇಕು ಎಂದು ಹೇಳಿದ್ದರು. ಅರ್ಜುನ್ ಕಪೂರ್ ಈ ಹೇಳಿಕೆ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಹಾಗಾಗಿ ಬಿಜೆಪಿ ಮುಖಂಡರು ಅರ್ಜುನ್ ಮಾತಿಗೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

Arjun Kapoor

ಬಿ.ಜೆ.ಪಿ ಮುಖಂಡ, ಮಧ್ಯ ಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಮಾತನಾಡಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಭಯ ಹುಟ್ಟಿಸುತ್ತಿದ್ದಾರೆ. ಯಾವ ಕಾರಣಕ್ಕೆ ಸಿನಿಮಾಗಳನ್ನು ಬಾಯ್ಕಾಟ್ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಜುನ್ ಅರಿಯಲಿ ಎಂದು ಅವರು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ನೀವು ಹೆದರಿಸಿದರೂ, ಪ್ರೇಕ್ಷಕರು ಹೆದರುತ್ತಾರೆ ಎಂಬ ತಪ್ಪು ಕಲ್ಪನೆ ಇದ್ದರೆ ಕೈ ಬಿಡಿ ಎಂದಿದ್ದಾರೆ ಮಿಶ್ರಾ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

Malaika Arora Arjun Kapoor

ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕೆಂದು ಹಲವರು ಕರೆ ನೀಡಿದ್ದಾರೆ. ಅದರಲ್ಲೂ ಹಿಂದೂ ವಿರೋಧಿ ನಟ, ನಟಿಯರ ಹಾಗೂ ನಿರ್ದೇಶಕರ ಚಿತ್ರಗಳನ್ನು ನೋಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿರುವ ಕುರಿತು ಅರ್ಜುನ್ ಕಪೂರ್ ಬೇಸರ ವ್ಯಕ್ತ ಪಡಿಸಿದ್ದರು. ಇಂತಹ ಶಕ್ತಿಗಳನ್ನು ತಡೆಯಬೇಕು ಎಂದು ಅವರು ಕರೆ ನೀಡಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *