ಚೆನ್ನೈ: ಶಾಲಾ-ಕಾಲೇಜುಗಳು ಧರ್ಮ ಪ್ರದರ್ಶನಕ್ಕೆ ಇರುವ ಸ್ಥಳವಲ್ಲ. ಅಲ್ಲಿ ನೀವು ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ಹಿಜಬ್-ಕೇಸರಿ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ನಟಿ ಖುಷ್ಬೂ ಕಿಡಿಕಾರಿದ್ದಾರೆ.
ಟ್ವೀಟ್ನಲ್ಲಿ ಏನಿದೆ?:
ಶಿಕ್ಷಣಕ್ಕೆ ಧರ್ಮವಿಲ್ಲ ಅದು ಸಮಾನತೆಯ ಆಲಯ. ನಾನು ಶಾಲೆಗೆ ಹೋಗುವಾಗ ಸಮವಸ್ತ್ರ ಧರಿಸುತ್ತಿದ್ದೆ. ಆಗ ಎಲ್ಲರಿಗೂ ರೂಲ್ಸ್ ಒಂದೇ ಆಗಿತ್ತು. ಸಮಾನತೆ ಇತ್ತು. ಆದರೆ ಇದೀಗ ಶಾಲಾ-ಕಾಲೇಜಿನಲ್ಲಿ ಧರ್ಮದ ವಿಚಾರವಾಗಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದನ್ನೂ ಓದಿ: ಹಿಜಬ್-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ
ನಾನು ಶಾಲೆಗೆ ಹೋಗುವಾಗ ಯಾರೂ ಕೂಡ ಯಾವುದನ್ನು ಧರಿಸಕೊಂಡು ಬರುವುದನ್ನು ನೋಡಿಲ್ಲ. ಆದರೆ ಸಮವಸ್ತ್ರ ಮಾತ್ರ ಕಡ್ಡಾಯವಾಗಿತ್ತು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈವರೆಗೆ ಯಾರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಆದರೆ ಇದೀಗ ಈ ಗೊಂದಲ ಯಾಕೆ?. ಸರಸ್ವತಿ ಜ್ಞಾನದ ಸಂಕೇತ ಕೆಲ ಕಿಡಿಗೇಡಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಶಿಕ್ಷಣದ ಬಗ್ಗೆ ಜ್ಞಾನವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಬರುವುದು ತಪ್ಪು.
Our children are our pride, irrespective of which religion they belong to. Why is the opposition hellbent on creating a rift between them? You cannot clap with one hand. Let us shake hands to secure their future n not pin them up against each other. Everything cannot be politics.
— KhushbuSundar (@khushsundar) February 9, 2022
ಶಿಕ್ಷಣದಲ್ಲಿ ಸಮಾನತೆ, ಶಿಸ್ತು, ಜ್ಞಾನವನ್ನು ವೃದ್ಧಿಸುವ ಸ್ಥಳ ಶಾಲಾ-ಕಾಲೇಜು ಇಲ್ಲಿ ಧರ್ಮದ ಆಚರಣೆಗೆ ಮುಂದಾಗಬೇಡಿ. ನಿಮ್ಮ ಧರ್ಮದ ಆಚರಣೆಯನ್ನು ನಿಮ್ಮ ಇಚ್ಛೆಯ ಪ್ರಕಾರ ಇತರ ಸ್ಥಳಗಲ್ಲಿ ಆಚರಿಸಿ. ಶಿಕ್ಷಣದ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್