ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ರಿಪೋರ್ಟ್ ಕೇಳಿದೆ: ಡಾ. ಎಂ.ಸಿ.ಸುಧಾಕರ್

Public TV
1 Min Read
MC SUDHAKAR

ಬೆಂಗಳೂರು: ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯವೈಖರಿ ಬಗ್ಗೆ ರಿಪೋರ್ಟ್ ಕೇಳಿದ್ದಾರೆ. ರಿಪೋರ್ಟ್ ಕೇಳಿರೋದ್ರಲ್ಲಿ ತಪ್ಪೇನು ಇಲ್ಲ ಎಂದು ಸಚಿವ ಡಾ. ಸುಧಾಕರ್ (M.C.Sudhakar) ತಿಳಿಸಿದರು.

ಹೈಕಮಾಂಡ್‌ನಿಂದ ಸಚಿವರ ರಿಪೋರ್ಟ್ ಕೇಳಿರುವ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ಎಲ್ಲಾ ಸಚಿವರ ವರದಿ ಕೇಳಿದೆ. ವರದಿ ಕೇಳಿರೋದು ತಪ್ಪಲ್ಲ. ನಾನು ಕೂಡಾ ನನ್ನ ಇಲಾಖೆ ವರದಿ ಕೊಟ್ಟಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ವಿಜಯೇಂದ್ರ ಕೆಳಗಿಳಿಸಲು ಆಗಲ್ಲ, ಒಂದು ಸಾರಿ ಅಧ್ಯಕ್ಷರಾದ್ರೆ ಎಲ್ರೂ ಒಪ್ಪಿಕೊಳ್ಳಲೇಬೇಕು: ಯತ್ನಾಳ್‌ಗೆ ಶ್ರೀರಾಮುಲು ಟಾಂಗ್

rahul gandhi mallikarjun kharge

ಹೈಕಮಾಂಡ್ ಸಚಿವ ಸ್ಥಾನ ಕೊಟ್ಟಿರೋದು ಓಡಾಡಿಕೊಂಡು ಇರೋದಕ್ಕೆ ಅಲ್ಲ. ಪಕ್ಷ ‌ಕೊಟ್ಟಿರೋ ಭರವಸೆ ಈಡೇರಿಸೋದು, ಇಲಾಖೆಯಲ್ಲಿ ಕೊಟ್ಟಿರೋ ಜವಾಬ್ದಾರಿ, ಅಭಿವೃದ್ಧಿ ಕೆಲಸ ಮಾಡಬೇಕು. ಸಚಿವರು ಕಾರಿನಲ್ಲಿ ಓಡಾಡಿಕೊಂಡು ಕೂತಿದ್ರೆ ಆಗೊಲ್ಲ. ಪಕ್ಷದ ಹೆಸರು, ವರ್ಚಸ್ಸು ವೃದ್ಧಿ ಮಾಡೋ ಜವಾಬ್ದಾರಿ ಶಾಸಕರು ಮತ್ತು ಮಂತ್ರಿಗಳ ಮೇಲೆ ಇದೆ. ಮಂತ್ರಿಗಳಾಗಿ ನಮಗೆ ಕೊಟ್ಟಿರೋ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿದ್ದಾರಾ ಅಂತ ತಿಳಿಯಲು ವರದಿ ಕೇಳಿದ್ದಾರೆ ಎಂದರು.

ವರದಿ ಪಡೆಯೋ ಅಧಿಕಾರ ಹೈಕಮಾಂಡ್‌ಗೆ ಇದೆ. ವರದಿ ಕೊಟ್ಟ ಮೇಲೆ ಹೈಕಮಾಂಡ್ ನಾಯಕರು ನೋಡ್ತಾರೆ. ಯಾರು ಕೆಲಸ ಮಾಡ್ತಾರೆ, ಇವರಿಗೆ ಎಚ್ಚರಿಕೆ ಕೊಡಬೇಕಾ? ಇನ್ನು ಏನಾದ್ರು ಸೂಚನೆ ಕೊಡಬೇಕಾ? ಉತ್ತಮ ಕೆಲಸ ಮಾಡಿದ್ರೆ ಪ್ರೋತ್ಸಾಹ ಕೊಡಬೇಕಾ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಇ.ಡಿಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ: ಮುಡಾ ಕೇಸ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ

Share This Article