-ಕಾಯಿಲೆ ಬರುತ್ತೆ ಹುಷಾರು…!
ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಗುರುವಾರದ ಬಿಸಿಲಿನ ತಾಪ ನೂರು ವರ್ಷದ ದಾಖಲೆಯನ್ನು ಮುರಿದಿದೆ.
ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಿಸಿಲು ನೂರು ವರ್ಷದ ದಾಖಲೆಯನ್ನು ಮುರಿದಿದೆ. ವಾಡಿಕೆಗಿಂತ ಬರೋಬ್ಬರಿ ಎರಡರಿಂದ ಐದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ.
ದಕ್ಷಿಣ ಒಳನಾಡಿನ ಭಾಗದಲ್ಲಿ 1996 ರಲ್ಲಿ 37.3 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ವಾಡಿಕೆಯ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ 32 ರಿಂದ 33 ಡಿಗ್ರಿ ಇರಬೇಕಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬರೋಬ್ಬರಿ 37, 38, 40 ಡಿಗ್ರಿ ತಾಪಮಾನ ರೆಕಾರ್ಡ್ ಆಗಿದೆ. ಆದರೆ ಕರಾವಳಿ ಭಾಗ ಸೇರಿದಂತೆ ಉತ್ತರ ಒಳನಾಡಿನಲ್ಲಿ ಕೊಂಚ ಬಿಸಿಲಿನ ಪ್ರಮಾಣ ತಗ್ಗಿದೆ. ಹೀಟ್ ವೇವ್ (ಬಿಸಿ ಗಾಳಿ) ಸೃಷ್ಟಿಯಾಗಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಬಿಸಿಲು ಏರಲಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣವೂ ಇಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕಾಯಿಲೆ ಬರುತ್ತೆ ಹುಷಾರು:
* ಬಿಸಿಲು ಪ್ರಮಾಣ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ವಾತಾವರಣದಲ್ಲಿ ತೇವಾಂಶದ ಪ್ರಮಾಣವೂ ಇಲ್ಲ. ಆದ್ದರಿಂದ ನಾನಾ ಕಾಯಿಲೆ ಬರುತ್ತದೆ. ಮುಖ್ಯವಾಗಿ ಡಿ-ಹೈಡ್ರೇಟ್ ಅಥವಾ ದೇಹ ನಿರ್ಜಲೀಕರಣ ವಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ನೀರು ಸೇವಿಸಿರಿ.
* ಮಧ್ಯಾಹ್ನ ಒಂದರಿಂದ ಮೂರು ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುತ್ತದೆ. ಈ ವೇಳೆ ಸಾಧ್ಯವಾದಷ್ಟು ಹೊರಗಡೆ ಹೋಗೋದನ್ನು ಕಡಿಮೆ ಮಾಡಿ. ಇಂತಹ ಸಂದರ್ಭಗಳಲ್ಲಿ ಬಿಸಿಲನ್ನು ತಡೆಯಲು ಛತ್ರಿ, ಸನ್ ಗ್ಲಾಸ್ ಬಳಸಿ.
* ವಯಸ್ಸಾದವರು, ಮಕ್ಕಳು ಹಾಗೂ ಕಾಯಿಲೆಯಿಂದ ಬಳಲುತ್ತಿರುವವರು ಬಿಸಿಲನ್ನು ಅವೈಡ್ ಮಾಡೋದು ಉತ್ತಮ.
* ದೇಹಕ್ಕೆ ಹಿತಕರವಾದ ತೆಳು ಕಾಟನ್ ಬಟ್ಟೆ ಧರಿಸಿ.
* ನೀರಿನಂಶವಿರುವ ಹಣ್ಣನ್ನು ಹೆಚ್ಚು ಸೇವಿಸಿ.
* ಜಂಕ್ ಫುಡ್ ಮುಟ್ಟಬೇಡಿ. ಕರಿದ ಪದಾರ್ಥಗಳು ತಿನ್ನಬೇಡಿ.
* ಅಲರ್ಜಿ ಸಮಸ್ಯೆ, ಕಣ್ಣಿನ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುವುರಿಂದ ಆರೋಗ್ಯದ ಬಗ್ಗೆ ಗಮನ ಇರಲಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv