ತಡರಾತ್ರಿ ಗುಡುಗು ಸಹಿತ ವರ್ಷಧಾರೆ-ಮನೆಗಳಿಗೆ ನುಗ್ಗಿದ ಮಳೆ ನೀರು

Public TV
1 Min Read
nml rain 2

-ಜನಜೀವನ ಸಂಪೂರ್ಣ ಅಸ್ತವ್ಯಸ್ಥ

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗಿನ ಜಾವ 4 ಗಂಟೆಗೆ ಅಬ್ಬರಿಸಿ ಬೊಬ್ಬಿರಿದ ಮಳೆಗೆ ಅಮಾನಿಕೆರೆ ಕೋಡಿ ಒಡೆದಿದೆ.

ಕೆರೆ ಕೋಡಿ ಒಡೆದ ಪರಿಣಾಮ 8 ಬಡಾವಣೆಯ 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಾರುತಿ ಲೇಔಟ್, ಗಜೇರಿಯಾ ಲೇಔಟ್, ಮಹಾತ್ಮಗಾಂಧಿ, ಚನ್ನಪ್ಪ ಬಡಾವಣೆ, ಶೇಷ ಬಡಾವಣೆಗಳು ಮುಳುಗಡೆಯಾಗಿವೆ.

ಮನೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಹೀಗಾಗಿ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಜನಪ್ರಿಯ ಅಪಾರ್ಟ್ ಮೆಂಟ್ ಜಲಾವೃತವಾಗಿದೆ. ಸ್ಥಳಕ್ಕೆ ಸ್ಥಳೀಯ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

nml rain 3

nml rain 4

nml rain 5

nml rain 6

nml rain 1

Share This Article
Leave a Comment

Leave a Reply

Your email address will not be published. Required fields are marked *