ಬೀದರ್: ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೀದರ್ (Bidar) ಜಿಲ್ಲೆ ತತ್ತರಿಸಿ ಹೋಗಿದ್ದು, 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
ಬೀದರ್ ತಾಲೂಕಿನ ಟಿ.ಮರ್ಜಾಪೂರ್ ಗ್ರಾಮದ ಮಾಣಿಕ್ಯರಾವ್ ಪಾಟೀಲ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ನಿಂಬೆಹಣ್ಣು, ಸೀಬೆ ಹಣ್ಣು, ಪಪ್ಪಾಯ ಹಾಗೂ ತರಕಾರಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಮಳೆ ಪಾಲಾಗಿವೆ.ಇದನ್ನೂ ಓದಿ: ಯೂಟ್ಯೂಬರ್ ಅಭಿಷೇಕ್ಗೆ SIT ಫುಲ್ ಗ್ರಿಲ್ – ಲೈಕ್ಸ್, ವ್ಯೂವ್ಸ್ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ
600 ನಿಂಬೆಹಣ್ಣು, 400 ಸೀಬೆ ಹಣ್ಣು, 200 ಮಾವಿನಕಾಯಿ ಸೇರಿದಂತೆ ಹಲವು ಹಣ್ಣುಗಳು ನೆಲಕ್ಕೆ ಬಿದ್ದು ಕೊಳೆತು ಹೋಗಿವೆ. ಒಟ್ಟು 5 ಲಕ್ಷ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ಇನ್ನೂ ಜಿಲ್ಲೆಯಾದ್ಯಂತ 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದೆ. ಇದರಿಂದ ನೊಂದ ರೈತರು ಪರಿಹಾರ ಕೊಡಿ ಇಲ್ಲ ಸಾಯಲು ಬಿಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಇದನ್ನೂ ಓದಿ: ಟ್ರಾಫಿಕ್ ಫೈನ್ ಡಿಸ್ಕೌಂಟ್ಗೆ ಭರ್ಜರಿ ರೆಸ್ಪಾನ್ಸ್ – 35.72 ಕೋಟಿ ದಂಡ ಪಾವತಿ