Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಣಮಳೆಗೆ ನ್ಯಾಷನಲ್ ಹೈವೇ ಜಲಾವೃತ -ವಾಹನಗಳ ಮುಳುಗಡೆ, ಕೋರಮಂಗಲದಲ್ಲಿ ನದಿಯಂತಾದ ರಸ್ತೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ರಣಮಳೆಗೆ ನ್ಯಾಷನಲ್ ಹೈವೇ ಜಲಾವೃತ -ವಾಹನಗಳ ಮುಳುಗಡೆ, ಕೋರಮಂಗಲದಲ್ಲಿ ನದಿಯಂತಾದ ರಸ್ತೆ

Public TV
Last updated: September 27, 2017 9:13 am
Public TV
Share
2 Min Read
NML RAIN AV 2 2
SHARE

ಬೆಂಗಳೂರು: ನವರಾತ್ರಿ ವೇಳೆ ರಣಚಂಡಿ ಮಳೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡಿ ನಿರಂತರವಾಗಿ ಭಾರಿ ಮಳೆ ಆಗಿದೆ. ರಾತ್ರಿ 10.30 ರಿಂದ ಬೆಳಗಿನ ಜಾವದವರೆಗೂ ಬಿಟ್ಟುಬಿಡದೇ ದಾಖಲೆಯ ಮಳೆ ಸುರಿದಿದೆ. ಇದರ ಪರಿಣಾಮ ಕೋರಮಂಗಲದ ಎನ್‍ಜಿವಿ ಗೇಟ್ ಬಳಿಯ ಪ್ರಮುಖ ರಸ್ತೆ ನದಿಯಂತಾಗಿಬಿಟ್ಟಿದೆ. ತುಂಬಿ ಹರಿಯುತ್ತಿರುವ ರಸ್ತೆಯಲ್ಲೇ ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಅಶಕ್ತರು, ಮಕ್ಕಳು ಈ ರಸ್ತೆಯಲ್ಲಿ ಸಾಗಿದ್ರೆ ಕೊಚ್ಚಿಕೊಂಡು ಹೋಗೋದು ಗ್ಯಾರಂಟಿ. ನೀರಿನ ರಭಸ ಅಷ್ಟು ಪ್ರಮಾಣ ಇದೆ.

R2

ಇತ್ತ ನೆಲಮಂಗಲ ಬಳಿಯ ಬಿನ್ನಮಂಗಲ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ಕಳೆದೊಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕು ಮುಳುಗಡೆಯಾಗಿದೆ. ಬಸ್ಸು, ಲಾರಿ ಸೇರಿದಂತೆ ಹಲವು ವಾಹನಗಳು ಮುಳುಗಡೆಯಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

R4 1

ದೊಡ್ಡಬಿದರಕಲ್ಲಿನ ಕೆರೆ ಒಡೆದಿದ್ದು ಅಂದಾನಪ್ಪ ಲೇಔಟ್ ನದಿಯಂತಾಗಿಬಿಟ್ಟಿದೆ. ನದಿಯೋಪಾದಿಯಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದ್ದು, ಸ್ಥಳೀಯರು ಪರದಾಡ್ತಿದ್ದಾರೆ.

R10 1

ಜೆ.ಪಿ ನಗರದ ಐದನೇ ಬ್ಲಾಕ್‍ನಲ್ಲಿರುವ ಶಾಕಾಂಬರಿ ನಗರದಲ್ಲಿರುವ ಶೋಭಾ ಡಿಪ್ಲೋರ್ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಪಕ್ಕದ ಮನೆಯ ಮೇಲೆ ಕುಸಿದುಬಿದ್ದಿದೆ. ತಡರಾತ್ರಿ 2 ಗಂಟೆಗೆ ಅವಘಡ ಸಂಭವಿಸಿದ್ದು, ಮನೆ ಬಾಗಿಲಿಗೆ ಸರಿಯಾಗಿ ಕಾಂಪೌಂಡ್ ಬಂದಿದೆ. ನಾಲ್ವರು ಮನೆಯಲ್ಲೇ ಸಿಲುಕಿದ್ದು, ಬೆಳಗ್ಗೆ ಬಂದ ಅಧಿಕಾರಿಗಳು ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಿ ನಾಲ್ವರನ್ನು ರಕ್ಷಿಸಿದ್ದಾರೆ. ಇನ್ನು ಎಂದಿನಂತೆ ಈ ಬಾರಿಯೂ ಕೋರಮಂಗಲ ಸಮೀಪದ ಎಸ್‍ಟಿ ಬೆಡ್ ಲೇಔಟ್ ಜಲಾವೃತವಾಗಿದೆ. ಅಪಾರ್ಟ್‍ಮೆಂಟ್‍ಗಳೆಲ್ಲಾ ಜಲಮಯವಾಗಿವೆ. ಎಲ್ಲೆಲ್ಲೂ ನೀರೇ ಕಂಡುಬರ್ತಿದೆ. ಗಾರೆಪಾಳ್ಯದಲ್ಲಿ ಪ್ರವಾಹ ಸ್ಥಿತಿಯನ್ನು ನೆನಪಿಸುವ ವಾತಾವರಣ ಇದೆ. ಇಡೀ ಗಾರೆಪಾಳ್ಯದಲ್ಲಿ ಎಲ್ಲಿ ನೊಡಿದ್ರೂ ನೀರೋ ನೀರು. ಇಲ್ಲಿನ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡ್ತಾ ಇದ್ದಾರೆ.

R8 1

ಮಳೆ ಬಂತು ಅಂದ್ರೆ ಸಾಕು ಶೇಷಾದ್ರಿ ರಸ್ತೆಯ ರೈಲ್ವೇ ಅಂಡರ್‍ಪಾಸ್ ಮತ್ತು ಶಿವಾನಂದ ವೃತ್ತದ ಅಂಡರ್ ಪಾಸ್ ಮುಳುಗಡೆ ಆಗುತ್ತಿದ್ದವು. ವಾಹನಗಳು ನೀರಲ್ಲಿ ಸಿಲುಕಿ ಸವಾರರು ಪರದಾಡ್ತಿದ್ರು. ಆದ್ರೆ ನಿನ್ನೆ ರಾತ್ರಿ ರಣಚಂಡಿ ಮಳೆ ಸುರಿದ್ರೂ ಈ ಅಂಡರ್‍ಪಾಸ್‍ಗಳಲ್ಲಿ ಮಳೆ ನೀರು ನಿಂತಿರಲಿಲ್ಲ. ಬಿಬಿಎಂಪಿ ಸಿಬ್ಬಂದಿ ಸಕಾಲಕ್ಕೆ ಈ ಭಾಗದ ಚರಂಡಿ ಕ್ಲೀನ್ ಮಾಡಿದ್ದ ಕಾರಣ ನೀರು ಸರಾಗವಾಗಿ ಹರಿಯುತ್ತಿತ್ತು. ವಾಹನಗಳು ಸಹ ಸರಾಗವಾಗಿ ಚಲಿಸ್ತಿದ್ದವು.

R7 1

ಇನ್ನು ಮಾರುತಿ ಲೇಔಟ್‍ನಲ್ಲಿ ಗೋಡೆ ಕುಸಿದುಬಿದ್ದ ಬೆನ್ನಲ್ಲೇ, ಚಂದ್ರಾಲೇಔಟ್‍ನ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮಲಗಲು ಜಾಗ ಇಲ್ಲದೇ ಇಲ್ಲಿನ ಜನ ರಾತ್ರಿಯಿಡಿ ನಿದ್ದೆಗೆಡುವಂತಾಯ್ತು. ಧವಸಧಾನ್ಯಗಳು ನೀರು ಪಾಲಾದವು. ಮನೆಗಳಿಂದ ನೀರನ್ನು ಎತ್ತಿ ಹಾಕಿ ಜನ ಸುಸ್ತಾದ್ರು. ಇದೇ ವೇಳೆ ಕೆಆರ್ ಪುರಂನ ಭೀಮಯ್ಯ ಬಡಾವಣೆಯಂತೂ ಸಂಪೂರ್ಣ ಜಲಾವೃತವಾಗಿದೆ. ಬಡಾವಣೆಯ ತುಂಬಾ ಮೊಣಕಾಲುದ್ದ ನೀರು ನಿಂತಿದೆ. ಲೇಔಟ್‍ನ ಗ್ರೌಂಡ್‍ಫ್ಲೋರ್ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಯ್ತು. ಮೂರ್ನಾಲ್ಕು ಅಡಿವರೆಗೂ ಹರಿಯುತ್ತಿದ್ದ ನೀರಲ್ಲಿ ಕಾರುಗಳು ಪ್ರಯಾಸಪಟ್ಟು ಚಲಿಸ್ತಾ ಇದ್ದಿದ್ದು ಕಂಡುಬಂತು.

R6 1

R5 1

R3 1

R1

 

NML RAIN AV 4

 

Share This Article
Facebook Whatsapp Whatsapp Telegram
Previous Article DVG RAIN 5 1 small ಮಳೆ ಅಬ್ಬರಕ್ಕೆ ನೂರಾರು ಮಂದಿ ಬೀದಿಪಾಲು – ಕೇಳೋರಿಲ್ಲ ದಾವಣಗೆರೆ ಸಂತ್ರಸ್ತರ ಗೋಳು
Next Article CHAKU IRITHA small ಬೈಕ್ ಮೆಲ್ಲಗೆ ಚಲಾಯಿಸಲು ಹೇಳಿದ್ದಕ್ಕೆ ಯುವಕನಿಗೆ ಚಾಕು ಇರಿತ

Latest Cinema News

shiva rajkumar shree marikamba temple
ಶಿರಸಿಯ ಶ್ರೀ ಮಾರಿಕಾಂಬಾ ಕ್ಷೇತ್ರಕ್ಕೆ ನಟ ಶಿವಣ್ಣ ದಂಪತಿ ಭೇಟಿ
Cinema Latest Sandalwood Uttara Kannada
kantara chapter 1 J.NTR
ಕಾಂತಾರ ಚಾಪ್ಟರ್-1 ಹೈದರಾಬಾದ್ ಪ್ರೀ-ರಿಲೀಸ್ ಇವೆಂಟ್‌ಗೆ Jr.NTR ಸಾಥ್
Cinema Latest Sandalwood Top Stories
jockey movie
‘ಮಡ್ಡಿ’ ಸಿನಿಮಾ ನಿರ್ದೇಶಕರ ಹೊಸ ಸಾಹಸ – ಟಗರು ಕಾಳಗ ಹಿನ್ನೆಲೆ ಮೋಷನ್ ಪೋಸ್ಟರ್
Cinema Latest Sandalwood Top Stories
Sri Murali
ಐತಿಹಾಸಿಕ ಚಿತ್ರದಲ್ಲಿ ನಟ ಶ್ರೀಮುರಳಿ
Cinema Latest Sandalwood
Anjali Sudhakar 3
ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?
Cinema Latest TV Shows

You Might Also Like

Bidar Rains
Bidar

ಗಡಿ ಜಿಲ್ಲೆ ಬೀದರ್‌ನಲ್ಲಿ ಧಾರಾಕಾರ ಮಳೆಗೆ ಭಾರೀ ಅವಾಂತರ – ರಸ್ತೆ ಸಂಚಾರ ಬಂದ್‌

17 seconds ago
Haryana Gurugram Thar Accident
Crime

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

6 minutes ago
DK Shivakumar 11
Bengaluru City

ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

23 minutes ago
Bagalkote Rain Death
Bagalkot

ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

29 minutes ago
MB Patil 2
Bengaluru City

ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

46 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?