ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

Public TV
1 Min Read
GLB 1

ಕಲಬುರಗಿ: ನಗರದಲ್ಲಿ ಶನಿವಾರ ಸಂಜೆ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೀಸಿದ ಬಿರುಗಾಳಿಗೆ ಜನ ಭಯಭೀತರಾಗಿದ್ದಾರೆ.

ಕಲಬುರಗಿಯ ರಟಕಲ್ ದೇವಸ್ಥಾನದಲ್ಲಿರುವ 56 ಅಡಿಯ ರೇವಣ್ಣ ಸಿದ್ದೇಶ್ವರ ಮೂರ್ತಿ ಧರೆಗುಳಿದಿದೆ. ಅದೃಷ್ಟವಶಾತ್ ಮಳೆಯ ಹಿನ್ನೆಲೆಯಿಂದಾಗಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ.

vlcsnap 2018 05 27 07h03m08s98

ನಗರದ ಸೇಡಂ ರಸ್ತೆಯ ಇಎಸ್ ಐ ಆಸ್ಪತ್ರೆ ಸುತ್ತಮುತ್ತ ಬೀಸಿದ ಭಾರೀ ಬಿರುಗಾಳಿ ಭಯಂಕರ ಧೂಳೆಬ್ಬಿಸಿದ್ದು, ಸ್ಥಳೀಯರು ಈ ಭಯಂಕರ ಬಿರುಗಾಳಿ ಬೀಸುವ ದೃಶ್ಯ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಯೆಮೆನ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಮೆಕ್ನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಗೂ ಹಬ್ಬಿದ್ದು, ಕಡಲತಡಿಯ ನಿವಾಸಿಗಳು ಆತಂಕದಲ್ಲಿದ್ದಾರೆ. 2 ದಿನಗಳಿಂದ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಗೆ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

vlcsnap 2018 05 27 07h02m51s183

Share This Article
Leave a Comment

Leave a Reply

Your email address will not be published. Required fields are marked *