ಸಿಡಿಲಿಗೆ ಓರ್ವ ಬಲಿ- 4 ದನಗಳ ಸಾವು

Public TV
1 Min Read
Rain 1

ಬೆಂಗಳೂರು: ಸಿಡಿಲು ಬಡಿದು ಕಲಬುರಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದನಗಳು ಸಾವನ್ನಪ್ಪಿ ಮೂವರಿಗೆ ಗಾಯವಾಗಿದೆ.

ಕಲಬುರಗಿ ತಾಲೂಕಿನ ಭೂಪಾಲ್‍ತೆಗನೂರ್ ಗ್ರಾಮದ ನಿವಾಸಿ ದಯಾನಂದ್ ಪೂಜಾರಿ (28) ಮೃತ ದುರ್ದೈವಿ. ದಯಾನಂದ್ ಜಮೀನಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾರಿಯ ಮಧ್ಯದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rain 2

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಇಲ್ಲಿನ ಮೂಡಬಿದ್ರೆಯ ಪಡುಮಾರ್ನಾಡು ಬಳಿಯ ಕೊಟ್ಟಿಗೆಗೆ ಸಿಡಿಲು ಬಡಿದು 4 ದನಗಳು ಬಲಿಯಾಗಿದ್ದು, ಆದಂ, ಮರಿಯಮ್ಮ ಮತ್ತು ಅವರ ಮಗಳಿಗೆ ಗಾಯವಾಗಿದೆ.

ಹಾವೇರಿ ನಗರ ಸೇರಿದಂತೆ ಕೆಲವೆಡೆ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಮಳೆಯಾಗದೆ ಬೆಳೆ ಒಣಗುತ್ತಿದ್ದವು. ಧಾರವಾಡದಲ್ಲಿ ಸಂಜೆ ಜಿಟಿಜಿಟಿಯಾಗಿದ್ದ ಮಳೆ, ರಾತ್ರಿ ವೇಳೆಗೆ ಧಾರಾಕಾರವಾಗಿ ಸುರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *