ಮೈಸೂರು: ದನ ಮೇಯಿಸುತ್ತಿದ್ದಾಗ ಸಿಡಿಲು ಬಡಿದು 6 ಮಂದಿ ಸಾವು

Public TV
0 Min Read
MYS SIDILU DEATH

ಮೈಸೂರು: ರಾಜ್ಯದಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ. ದನ ಮೇಯಿಸುವಾಗ ಸಿಡಿಲು ಬಡಿದು 6 ಮಂದಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಂದಿನಾಥಪುರದಲ್ಲಿ ನಡೆದಿದೆ.

MYS SIDILU DEATH AV 7

ಪುಟ್ಟಣ್ಣ(60), ಸುವರ್ಣಮ್ಮ(45), ಸುದೀಪ್ ಹಾಗೂ ತಿಮ್ಮೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರಾದ ಸುಜಯ್(18) ಮತ್ತು ಉಮೇಶ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

MYS SIDILU DEATH AV 9

ದನ ಮೇಯಿಸುತ್ತಿದ್ದ ವೇಳೆ ಜೋರಾಗಿ ಮಳೆ ಸುರಿಯಲು ಆರಂಭಿಸಿತ್ತು. ಮಳೆ ಜೋರಾದ ಕಾರಣ ರಕ್ಷಣೆಗಾಗಿ ಗುಡಿಯ ಆಶ್ರಯ ಪಡೆದಿದ್ದವರಿಗೆ ಏಕಕಾಲಕ್ಕೆ ಸಿಡಿಲು ಬಡಿದಿದೆ.

MYS SIDILU DEATH AV 5

ಮೃತರೆಲ್ಲರೂ ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.

MYS SIDILU DEATH AV 4

MYS SIDILU DEATH AV 6

MYS SIDILU DEATH AV 8

MYS SIDILU DEATH AV 2

Share This Article
Leave a Comment

Leave a Reply

Your email address will not be published. Required fields are marked *