ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಅತ್ಯಂತ ಸಾಮಾನ್ಯ. ಹಾಗಾಗಿ, ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಬೇಸಿಗೆಯಲ್ಲಿ ಯಥೇಚ್ಚವಾಗಿ ದ್ರವ ಆಹಾರಗಳನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆಯುರ್ವೇದ ಔಷದಗಳಲ್ಲಿ ಭಾರತೀಯ ನೆಲ್ಲಿಕಾಯಿ ಅಥವಾ ಆಮ್ಲಾವನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಹಾಗೂ ಬಿಸಿಲಿನ ದಾಹವನ್ನು ತಣಿಸುವ ನೆಲ್ಲಿಕಾಯಿ ಜ್ಯೂಸ್ ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ.
ಬೇಕಾಗುವ ಸಾಮಗ್ರಿಗಳು:
ನೆಲ್ಲಿಕಾಯಿ ರಸ – ಒಂದು ಕಪ್
ಜೇನು ತುಪ್ಪ – 1 ಚಮಚ
ಪಿಂಕ್ ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
*ಮೊದಲಿಗೆ ಬೀಜ ತೆಗದ ನೆಲ್ಲಿಕಾಯಿಯನ್ನು ಮಿಕ್ಸರ್ನಲ್ಲಿ ರುಬ್ಬಿಕೊಳ್ಳಿ.
*ನಂತರ ಒಂದು ಉದ್ದನೆಯ ಲೋಟಕ್ಕೆ ಒಂದು ಕಪ್ ನೆಲ್ಲಿಕಾಯಿ ರಸ ಹಾಕಿ.
*ಬಳಿಕ ಅದಕ್ಕೆ ಜೇನು ತುಪ್ಪ ಮತ್ತು ಪಿಂಕ್ ಉಪ್ಪು ಸೇರಿಸಿ.
*ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ.
*ನೆಲ್ಲಿಕಾಯಿ ರಸ ಕಡಿಮೆಯಿದ್ದಲ್ಲಿ ನೀರು ಬೆರೆಸಿಕೊಳ್ಳಬಹುದು.
*ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.