Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೂರು ಸೊಂಡಿಲುಗಳ ಗಣೇಶನ ವಿಗ್ರಹವನ್ನು ಹೊಂದಿರುವ ದೇಶದ ಏಕೈಕ ದೇವಾಲಯವಿದು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮೂರು ಸೊಂಡಿಲುಗಳ ಗಣೇಶನ ವಿಗ್ರಹವನ್ನು ಹೊಂದಿರುವ ದೇಶದ ಏಕೈಕ ದೇವಾಲಯವಿದು

Latest

ಮೂರು ಸೊಂಡಿಲುಗಳ ಗಣೇಶನ ವಿಗ್ರಹವನ್ನು ಹೊಂದಿರುವ ದೇಶದ ಏಕೈಕ ದೇವಾಲಯವಿದು

Public TV
Last updated: August 30, 2025 3:41 pm
Public TV
Share
3 Min Read
trishund mayureshwar ganpati
SHARE

ಹಿಂದೂ ಧರ್ಮದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದಾಗ, ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ. ಈ ವಿಘ್ನ ವಿನಾಶಕನನ್ನು ಆರಾಧಿಸುವುದರಿಂದ ಎಲ್ಲಾ ಮಂಗಳಕರವಾಗುವುದೆಂದು ನಂಬಲಾಗಿದೆ. ಸಾಮಾನ್ಯವಾಗಿ ಎಡಮುರಿ ಗಣಪತಿ, ಬಲಮುರಿ ಗಣಪತಿಯ ಮೂರ್ತಿಯನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಮೂರು ಸೊಂಡಿಲಿರುವ ಗಣಪತಿ ಯಾವತ್ತಾದರೂ ನೋಡಿದ್ದೀರಾ? ಹೌದು, ಪುಣೆಯಲ್ಲಿ ಮೂರು ಸೊಂಡಿಲಿರುವ ದೇವಾಲಯವೊಂದಿದೆ. ಇದು ಮೂರು ಸೊಂಡಿಲಿರುವ ಗಣೇಶನ ವಿಗ್ರಹವನ್ನು ಹೊಂದಿರುವ ಭಾರತದ ಏಕೈಕ ದೇವಾಲಯವಾಗಿದೆ. ಹಾಗಿದ್ರೆ ಈ ದೇವಾಲಯದ ವಿಶೇಷತೆಯೇನು? ಇಲ್ಲಿರುವ ಗಣಪನಿಗೆ ಮೂರು ಸೊಂಡಿಲು ಏಕಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

ಇವನು ಮೂರು ಸೊಂಡಿಲ ಗಣಪ:
ಗಣೇಶನಿಗೆ ಒಂದು ಸೊಂಡಿಲು ಸಾಮಾನ್ಯ ಅದರಲ್ಲೂ ಬಲಮುರಿ, ಎಡೆಮುರಿ ಎಂಬ ಪ್ರತ್ಯೇಕತೆಯಿದೆ. ಆದರೆ ಮುದ್ಗಲ ಪುರಾಣದ ಪ್ರಕಾರ ಗಣೇಶನಿಗೆ 32 ರೂಪಗಳಿವೆ. ಆ ರೂಪದಲ್ಲಿ ತ್ರಿಮುಖ ಗಣಪತಿಯೂ ಒಂದು. ಹಾಗೆಂದರೆ ಏನು ಅಂತೀರಾ? ಮೂರು ಸೊಂಡಿಲುಗಳನ್ನು ಹೊಂದಿರುವ ಗಣೇಶನ ಬಗ್ಗೆ ಕೇಳಿದ್ದೀರಾ? ಗಣೇಶನಿಗೆ ಮೂರು ಸೊಂಡಿಲುಗಳಿರುವ ಉಲ್ಲೇಖವಿದೆ. ಈ ವಿಶಿಷ್ಟ ದೇವಾಲಯ ಪುಣೆಯಲ್ಲಿದೆ. ಈ ದೇವಾಲಯವನ್ನು ತ್ರಿಶುಂಡಿ ಗಣಪತಿ, ಮಯೂರೇಶ್ವರ ಗಣಪತಿ ಮಂದಿರ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ತ್ರಿಸುಂದ ಗಣಪತಿ ದೇವಾಲಯವು ಸೋಮವಾರಪೇಟೆ ಜಿಲ್ಲೆಯ ನಜಗಿರಿ ಎಂಬ ನದಿಯ ದಡದಲ್ಲಿದೆ.

trishund mayureshwar ganpati 3

ಷಣ್ಮುಖನಿಗೂ ಮುಂಚೆ ನವಿಲು ಗಣಪತಿಯ ವಾಹನ:
ಇಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಯು ಮೂರು ಸೊಂಡಿಲು ಮತ್ತು ಆರು ತೋಳುಗಳನ್ನು ಹೊಂದಿದ್ದಾನೆ. ಇದು ನವಿಲಿನ ಸಿಂಹಾಸನದ ಮೇಲೆ ಕುಳಿತಿರುವ ಅಪರೂಪದ ವಿಗ್ರಹವಾಗಿದೆ. ಈ ತ್ರಿಮುಖ ಗಣೇಶನ ರೂಪವರ್ಣನೆ ಬರುವುದು ಮುದ್ಗಲ ಪುರಾಣದ ಗಣೇಶಾವತಾರ ಪ್ರಸ್ತಾಪದಲ್ಲಿ ಈ ಗಣೇಶ 32 ಗಣಪತಿ ಅವತಾರಗಳಲ್ಲಿ 28ನೇಯವನು. ಈತ ಮೂರು ಸೊಂಡಿಲು, ಆರು ಕೈ ಮತ್ತು ನವಿಲಿನ ವಾಹನ ಹೊಂದಿದ್ದಾನೆ. ಮೂರು ಸೊಂಡಿಲು ಭೂತ, ಭವಿಷ್ಯತ್, ವರ್ತಮಾನಗಳು ಗಣೇಶನ ಅಧೀನ ಎಂದು ತೋರಿಸಿದರೆ ಆರು ಕೈಗಳಲ್ಲಿ ಪಾಶ, ಅಂಕುಶ, ಅಮೃತ ಕಲಶ, ರುದ್ರಾಕ್ಷಿ ಹಿಡಿದಿದ್ದಾನೆ. ಹಾಗೆಯೇ ವರದಹಸ್ತ, ಅಭಯ ಹಸ್ತ ತೋರುತ್ತಾನೆ. ಇವನು ಶಾಂತ ಸ್ವಭಾವದ ಗಣಪತಿಯಾಗಿದ್ದು ಕೆಂಪು ಬಣ್ಣವನ್ನು ಹೊಂದಿದ್ದಾನೆ ಎನ್ನಲಾಗುತ್ತದೆ.

trishund mayureshwar ganpati 2

ಯಾರು ನಿರ್ಮಿಸಿದ ದೇಗುಲ? ವಿಶೇಷಗಳೇನು?
ಇಂದೋರ್ ಬಳಿಯ ಧಂಪುರದಿಂದ ಬಂದ ಭೀಮಜಿಗಿರಿ ಗೋಸಾವಿ ಎಂಬ ಭಕ್ತ 1754ರಲ್ಲಿ ಈ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದರು. ಹದಿನಾರು ವರ್ಷಗಳ ನಂತರ, 1770ರಲ್ಲಿ, ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಇದನ್ನು ರಾಜಸ್ಥಾನಿ, ಮಾಲ್ವಾ ಮತ್ತು ದಕ್ಷಿಣ ಭಾರತೀಯ ದೇವಾಲಯ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವಾದ ಡೆಕ್ಕನ್ ಬಸಾಲ್ಟ್ ಬಳಸಿ ನಿರ್ಮಿಸಲಾಯಿತು. ದೇವಾಲಯದ ಗರ್ಭಗುಡಿಯ ಗೋಡೆಗಳು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಶಾಸನಗಳನ್ನು ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಹೊಂದಿವೆ. ‎ದೇವಾಲಯದ ಪ್ರವೇಶದ್ವಾರಕ್ಕೆ ಹೋಗುವ ಒಂದು ಸಣ್ಣ ಅಂಗಳವಿದೆ. ದ್ವಾರಪಾಲಕರ ವಿಗ್ರಹಗಳನ್ನು ಸುಂದರವಾಗಿ ಕೆತ್ತಲಾಗಿದೆ. ದೇವಾಲಯದ ಆವರಣವು ದೇವತೆಗಳು, ಆನೆಗಳು, ಕುದುರೆಗಳು ಮತ್ತು ಇತರ ಅನೇಕ ಪ್ರಾಣಿಗಳ ಸುಂದರ ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ.

trishund mayureshwar ganpati 5

ಈ ದೇವಾಲಯದಲ್ಲಿ, ಒಂದು ಗೋಡೆಯ ಮೇಲೆ ಕತ್ತಿ ಹಿಡಿದ ಪ್ರಾಣಿಯನ್ನು ಕಬ್ಬಿಣದ ಸರಪಳಿಗಳಿಂದ ಬಂಧಿಸಿರುವ ಅಮೇರಿಕನ್ ಸೈನಿಕನ ಶಿಲ್ಪವಿದೆ. ಇದು ನಮ್ಮ ದೇಶದ ಬೇರೆ ಯಾವುದೇ ದೇವಾಲಯದಲ್ಲಿ ಕಂಡುಬರುವುದಿಲ್ಲ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಈ ಗಣೇಶನ ವಿಗ್ರಹದ ಕೆಳಗೆಯೇ ಈ ದೇಗುಲ ನಿರ್ಮಾತೃ ಗೋಸಾವಿ ಗುರುಗಳ ಸಮಾಧಿಯಿದೆ. ಆ ನೆಲ ಮಾಳಿಗೆಯನ್ನು ಗುರುಪೂರ್ಣಿಮೆ ದಿನ ತೆಗೆದು ವರ್ಷ ಪೂರ್ತಿ ಬತ್ತದ ನೀರಿನ ಕುಂಡವನ್ನು ಸ್ವಚ್ಛ ಮಾಡಿ ಗೋಸಾವಿ ಗುರುವಿಗೆ ಪೂಜೆ ಮಾಡಿ ಮತ್ತೆ ಮುಚ್ಚಲಾಗುತ್ತದೆ.

trishund mayureshwar ganpati 4

ದೇವಾಲಯದ ಗೋಡೆಗಳು ಸಂಸ್ಕೃತ, ದೇವನಾಗರಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಶಾಸನಗಳನ್ನು ಹೊಂದಿವೆ. ಇದು ಪೇಶ್ವೆ ಯುಗದಲ್ಲಿ ಪುಣೆಯ ಶ್ರೀಮಂತ ಸಾಂಸ್ಕೃತಿಕ ಅಡ್ಡ-ಪ್ರವಾಹಗಳನ್ನು ಎತ್ತಿ ತೋರಿಸುತ್ತದೆ.ಪ್ರತಿ ವರ್ಷ, ವಿಶೇಷವಾಗಿ ಗಣೇಶ ಚತುರ್ಥಿಯ ಸಮಯದಲ್ಲಿ ಈ ದೇವಾಲಯವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ದೇವರಿಗೆ ದೂರ್ವಾ ಹುಲ್ಲು ಮತ್ತು ಮೋದಕಗಳನ್ನು ಅರ್ಪಿಸಲಾಗುತ್ತದೆ. ಇಲ್ಲಿ ನಡೆಯುವ ಪ್ರಾರ್ಥನೆಗಳು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಹೊಸ ಆರಂಭಗಳಲ್ಲಿ ಯಶಸ್ಸನ್ನು ತರುತ್ತವೆ ಎಂದು ಹಲವರು ನಂಬುತ್ತಾರೆ.

ಗಣೇಶ ಚತುರ್ಥಿಯ ಸಮಯದಲ್ಲಿ ಗಣಪತಿ ದೇವಾಲಯವು ವಿಶೇಷವಾಗಿ ಪ್ರಸಿದ್ಧವಾಗಿದೆ. ಪುಣೆ ಮತ್ತು ಅದರಾಚೆಯಿಂದ ಸಾವಿರಾರು ಭಕ್ತರು ಮೂರು ಸೊಂಡಿಲಿರುವ ಗಣೇಶನನ್ನು ಪೂಜಿಸಲು ಬರುತ್ತಾರೆ. ಬುದ್ಧಿವಂತಿಕೆ, ಸಂಪತ್ತು ಮತ್ತು ಯಶಸ್ಸಿಗಾಗಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. 

TAGGED:Lord GaneshMayureshwar Ganpati MandirpuneTrishund
Share This Article
Facebook Whatsapp Whatsapp Telegram

Cinema news

chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories
The Devil
10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ – ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್
Bengaluru City Cinema Latest Main Post Sandalwood
Samantha Ruth Prabhu 1
ಮೊದಲು ನಿಧಿ ಅಗರ್ವಾಲ್‌, ನಂತ್ರ ಸಮಂತಾ – ಫ್ಯಾನ್ಸ್‌ನಿಂದಲೇ ಕಸಿವಿಸಿ
Cinema Latest South cinema Top Stories
Darshan Fans
ವಿಜಯಲಕ್ಷ್ಮಿ ದರ್ಶನ್‌ ಬೆಂಕಿ ಮಾತು – ಕಿಚ್ಚನ ವಿರುದ್ಧ ಮಾತಿನ ಯುದ್ಧಕ್ಕೆ ನಿಂತ ಡಿಬಾಸ್‌ ಫ್ಯಾನ್ಸ್‌
Bengaluru City Cinema Latest Main Post Mandya Sandalwood

You Might Also Like

Hassan Office 2
Districts

ಮೈಸೂರು | ಸರಗೂರು ತಾಲೂಕು ಕಚೇರಿಯಲ್ಲಿ RDX ಸ್ಫೋಟಕ ಇಟ್ಟಿರುವುದಾಗಿ ಬೆದರಿಕೆ

Public TV
By Public TV
37 minutes ago
Dr.Kuladeep
Dakshina Kannada

ಸುಳ್ಯ | 6 ತಿಂಗಳಿಂದ ಸಂಬಳ ಕೊಡದ ಸರ್ಕಾರ – ಜೀವನ ನಡೆಸೋದು ಕಷ್ಟ ಅಂತ ರಾಜೀನಾಮೆ ಕೊಟ್ಟ ವೈದ್ಯ

Public TV
By Public TV
52 minutes ago
AIR INDIA
Latest

ಹಾರಾಟ ವೇಳೆ ಇಂಜಿನ್ ಸ್ಥಗಿತ – ಟೇಕಾಫ್ ಆದ ಸ್ವಲ್ಪ ಹೊತ್ತಿಗೆ ದೆಹಲಿಗೆ ಏರ್‌ ಇಂಡಿಯಾ ಫ್ಲೈಟ್‌ ವಾಪಸ್‌

Public TV
By Public TV
1 hour ago
Chinese Rifle Scope
Latest

ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ

Public TV
By Public TV
1 hour ago
Russia Gujarat Student
Latest

ರಷ್ಯಾ ಸೇನೆ ಸೇರಲು ಒತ್ತಾಯ – ಉಕ್ರೇನ್‌ನಿಂದ SOS ವಿಡಿಯೋ ಹರಿಬಿಟ್ಟ ಗುಜರಾತ್ ವಿದ್ಯಾರ್ಥಿ

Public TV
By Public TV
2 hours ago
First driverless Pink Metro train arrives in Bengaluru
Bengaluru City

ಬೆಂಗಳೂರಿಗೆ ಬಂದಿಳಿದ ಮೊದಲ ಚಾಲಕರಹಿತ ಪಿಂಕ್ ಮೆಟ್ರೋ ರೈಲು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?