ಸಿಎಂ ಹೇಳಿಕೆ 9ನೇ ಅದ್ಭುತ, ಸಿದ್ದರಾಮಯ್ಯಗೆ ಚಳಿ ಜ್ವರ ಶುರುವಾಗಿದೆ: ಎಚ್‍ಡಿಕೆ

Public TV
1 Min Read
CM HDK

ಚಿಕ್ಕಮಗಳೂರು: ಅಮಿತ್ ಶಾ ಕುಮಾರಸ್ವಾಮಿ ಭೇಟಿಯಾಗಿದ್ದಾರೆ ಎನ್ನುವ ಸಿಎಂ ಹೇಳಿಕೆ ಒಂಭತ್ತನೇ ಅದ್ಭುತ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಚಳಿ ಜ್ವರ ಶುರುವಾಗಿದೆ. ಜೆಡಿಎಸ್ ಬಗ್ಗೆ ಮಾತನಾಡೋದಕ್ಕೆ ಅವರ ಬಳಿ ವಿಷಯವಿಲ್ಲ. ಅಮಿತ್ ಶಾ ಕಟ್ಟಿಕೊಂಡು ನನಗೇನು ಆಗಬೇಕು. ಅವರು ಹೇಳಿರುವ ಸಮಯದಲ್ಲಿ ನಾನು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರಚಾರ ಮಾಡುತ್ತಿದ್ದೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗಿ ವಾಪಸ್ ಬಂದಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣಕೊಟ್ಟರು. ಇದನ್ನೂ ಓದಿ:ನನಗೆ ಮರಾಠಿ ಬರಲ್ಲ ಕ್ಷಮಿಸಿ ಅನ್ನೋದ್ರಲ್ಲಿ ತಪ್ಪೇನಿದೆ: ಸಿಎಂ ಪ್ರಶ್ನೆ

ಕೊಪ್ಪದಲ್ಲಿ ಇಂದು ಭಾಷಣ ಮಾಡುತ್ತಿರುವ ವೇಳೆ ಆಜಾನ್ ಧ್ವನಿ ಕೇಳಿದ ಹಿನ್ನೆಲೆಯಲ್ಲಿ ಎಚ್‍ಡಿಕೆ ಭಾಷಣ ನಿಲ್ಲಿಸಿದರು. ಆಜಾನ್ ಮುಗಿದ ಎರಡು ನಿಮಿಷದ ಬಳಿಕ ಎಚ್‍ಡಿಕೆ ಜೆಡಿಎಸ್ ಅಭ್ಯರ್ಥಿ ವೆಂಕಟೇಶ್ ಪರ ಪ್ರಚಾರ ಭಾಷಣ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *