ಹಾಸನ: ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರಿಟ್ಟಿದ್ದು ರಾಜಕೀಯ ಕಾರಣಕ್ಕೆ ಅಲ್ಲ. ಹಳೆಯ ನೆನಪು ನೆನೆದು ಭಾವುಕರಾದರು ಅಷ್ಟೇ ಅದನ್ನೇ ಮಾಧ್ಯಮಗಳು ದೊಡ್ಡದು ಮಾಡಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಶಿವರಾಂ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ರೇವಣ್ಣ, “ಕುಮಾರಸ್ವಾಮಿ ಅವರ ಮಗನೂ ಚಿತ್ರರಂಗದಲ್ಲಿದ್ದಾರೆ. ಕುಮಾರಸ್ವಾಮಿಗೆ ಪುತ್ರನನ್ನು ನಿಲ್ಲಿಸೋ ಒತ್ತಾಸೆ ಇರಲಿಲ್ಲ. ಜನರ ತೀರ್ಮಾನದಂತೆ ನಿಲ್ಲಿಸಿದ್ದಾರೆ. ಸುಮಲತಾ ಈ ಹಿಂದೆ ಚುನಾವಣೆಗೆ ನಿಲ್ಲುವೆ ಎಂದು ಹೇಳಿರಲಿಲ್ಲ” ಎಂದು ಹೇಳಿದ್ದಾರೆ.
ನಾನು ಮಂಡ್ಯ, ಮೈಸೂರಲ್ಲೂ ಪ್ರಚಾರ ಮಾಡುವೆ. ರಾಜಕಾರಣಿದಲ್ಲಿ ಸಣ್ಣ ಪುಟ್ಟ ಗೊಂದಲ ಸಹಜ. ಹಾಸನದಲ್ಲಿ ಪ್ರಜ್ವಲ್ ನಿಲ್ಲಬೇಕು ಎಂದು ಫೈನಲ್ ಮಾಡಲಾಗಿದೆ. ಸೋಮವಾರ ದೇವೇಗೌಡರು ಹಾಸನದಿಂದ ನಿಲ್ಲಬೇಕು ಎಂದಿದ್ದ ರೇವಣ್ಣ ಇಂದು ಹಾಸನದಿಂದ ಪ್ರಜ್ವಲ್ ರೇವಣ್ಣನೇ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಯಾವ ಪಕ್ಷದಲ್ಲೂ ಕುಟುಂಬ ರಾಜಕಾರಣ ಇಲ್ಲವೇ, ಅದು ಮಾಧ್ಯಮಗಳಿಗೆ ಕಾಣೋದಿಲ್ಲವೇ ಎಂದು ಕುಟುಂಬ ರಾಜಕಾರಣದ ಬಗ್ಗೆ ರೇವಣ್ಣ ಕಿಡಿಕಾರಿದ್ದಾರೆ. ಅದನ್ನು ಬಿಟ್ಟು ನಮ್ಮ ಕುಟುಂಬವನ್ನೇ ಟಾರ್ಗೆಟ್ ಮಾಡೋದು ಏಕೆ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv