– ಏನು ಕುಡಿದಿದ್ದೀಯಾ ಸುಮ್ನಿರು ಎಂದ ಈಶ್ವರಪ್ಪ
ಬೆಂಗಳೂರು: ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೊಠಡಿ ಮುಂದೆ ಮೆಗಾ ಡ್ರಾಮಾ ನಡೆದಿದೆ. ಸಚಿವ ರೇವಣ್ಣರನ್ನ ಭೇಟಿ ಮಾಡಲು ಅವರ ಕೊಠಡಿ ಬಳಿ ಮಾಜಿ ಡಿಸಿಎಂ ಈಶ್ವರಪ್ಪ ಹೋಗಿದ್ದರು. ಆದರೆ ಅಲ್ಲಿ ಸಚಿವರು ಇರಲಿಲ್ಲ. ವಾಪಸ್ ಆಗುತ್ತಿದ್ದ ವೇಳೆ ಸಚಿವ ರೇವಣ್ಣರ ಶಿಷ್ಯರು ನಮ್ಮ ಸರ್ಕಾರವನ್ನು ಏಕೆ ಟೀಕಿಸುತ್ತೀರಿ ಎಂದು ಈಶ್ವರಪ್ಪ ಜೊತೆ ತಗಾದೆ ತೆಗೆದರು.
ಈಶ್ವರಪ್ಪನವರು ಮಾಧ್ಯಮದವರ ಜತೆ ಮಾತನಾಡುವಾಗ ರೇವಣ್ಣ ಶಿಷ್ಯರು ತಗಾದೆ ತೆಗೆಯಲು ಆರಂಭಿಸಿದರು. ಜೆಡಿಎಸ್ ಸರ್ಕಾರವನ್ನ ಏಕೆ ಟೀಕೆ ಮಾಡ್ತಿರಾ ಅಂತಾ ಪ್ರಶ್ನೆ ಮಾಡಿದ್ರು. ಬಿಜೆಪಿ ಸರ್ಕಾರವಿದ್ದಾಗ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ನೋಡಿದ್ದೇವೆ. ಅಂದು ನೀವು ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಹೇಳಿ ಎಂದು ಕೇಳಿದರು. ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ, ಏನು ಕುಡಿದ್ದೀಯಾ…ಮುಚ್ಕೊಂಡು ಇರು ಅಂತಾ ಹೇಳಿ ಬಿಸಿ ಮುಟ್ಟಿಸಿದರು.
ಸಚಿವ ರೇವಣ್ಣರಿಗೆ ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ನೀಡಿದೆ. ತಮ್ಮ ಇಲಾಖೆಯ ಕೆಲಸಗಳನ್ನು ನೋಡುವುದು ಬಿಟ್ಟು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಒಬ್ಬ ಶಾಸಕನಾಗಿ ಸಚಿವರ ಈ ಹಸ್ತಕ್ಷೇಪ ತಪ್ಪು ಎಂದು ಹೇಳುತ್ತಿದ್ದೇನೆ. ಈಶ್ವರಪ್ಪರ ಅಥವಾ ಯಡಿಯೂರಪ್ಪರ ಬಗೆ ಮಾತನಾಡುವ ಹಕ್ಕು ರೇವಣ್ಣರಿಗಿಲ್ಲ ಎಂದು ಗುಡುಗಿದರು.
ನಿನ್ನೆಯವರೆಗೂ ಉದ್ಯೋಗ ಇಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕುಳಿತಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯರನವರು ಕಾಂಗ್ರೆಸ್ ನಿಂದ ಹೊರ ಹಾಕಿದಾಗ ಉದ್ಯೋಗವಿಲ್ಲದೇ ಕುಳಿತುಕೊಂಡಿದ್ದರು. ಇಂದು ರಾಜ್ಯಾಧ್ಯಕ್ಷರಾದ ಕೂಡಲೇ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಗ್ಗೆ ವಿಶ್ವನಾಥ್ ಹಗುರವಾಗಿ ಮಾತನಾಡಬಾರು ಎಂದು ಈಶ್ವರಪ್ಪ ಎಚ್ಚರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
https://www.youtube.com/watch?v=-jOV2CgFzN4