ರಾಮಮಂದಿರ ನಿರ್ಮಾಣ ಬಿಜೆಪಿ ಕೈಯಲ್ಲಿ ಆಗಲ್ಲ, ನಾನೇ ಮಾಡಬೇಕು: ಹೆಚ್‌ಡಿಕೆ

Public TV
2 Min Read
HDKumaraswamy

ರಾಮನಗರ: ರಾಮಮಂದಿರ (Ram Mandir) ನಿರ್ಮಾಣದ ಬಗ್ಗೆ ಅವರು ಘೋಷಣೆ ಮಾಡಿದ್ರೂ ಅದನ್ನ ನಾನೇ ಮಾಡಬೇಕು. ಅವರ ಕೈಯಲ್ಲಿ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.

ರಾಜ್ಯ ಬಜೆಟ್‌ನಲ್ಲಿ (Karnataka Budget) ಬೃಹತ್ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಘೋಷಣೆ ವಿಚಾರದ ಕುರಿತು ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಅವರು ರಾಮಮಂದಿರವನ್ನು 3 ವರ್ಷದ ಹಿಂದೆ ಮಾಡಿ ಕಟ್ಟಿದ್ದಿದ್ದರೇ ಒಪ್ಪಿಕೊಳ್ಳುತ್ತಿದ್ದೆ. ಆದರೆ ಇನ್ನೆರಡು ತಿಂಗಳಲ್ಲಿ ಚುನಾವಣೆ ಘೋಷಣೆ ಆಗುತ್ತದೆ. ಚುನಾವಣೆ (Election) ಘೋಷಣೆ ಆದ್ಮೇಲೆ ಇದು ಪುಸ್ತಕದ ಒಳಗಡೆಯೇ ಇರುತ್ತದೆ. ರಾಮಮಂದಿರವನ್ನು ಇವರಿಗೆ ಕಟ್ಟಲಾಗುವುದಿಲ್ಲ. ಮುಂದೆ ನಮ್ಮ ಸರ್ಕಾರ ಬಂದು ನಾವೇ ರಾಮಮಂದಿರ ಕಟ್ಟಬೇಕು. ಇಲ್ಲಿ ಅವರು ಯಾವ ಜಪ ಮಾಡಿದ್ರೂ ಬಿಜೆಪಿ ಗೆಲ್ಲಲು ಆಗುವುದಿಲ್ಲ ಎಂದು ತಿಳಿಸಿದರು.

bjp flag

ಉತ್ತರ ಕರ್ನಾಟಕ ಭಾಗದಲ್ಲೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನ ಭ್ರಮಾನಿರಸರಾಗಿದ್ದಾರೆ. ಆದ್ದರಿಂದ ರಾಮನಗರ, ಮಂಡ್ಯಕ್ಕೆ ಬಂದು ಭದ್ರಕೋಟೆ ಛಿದ್ರ ಮಾಡುತ್ತೇನೆ ಎನ್ನುವುದು ವಾಸ್ತವಕ್ಕೆ ಹತ್ತಿರವಿಲ್ಲ. ಬಾಯಲ್ಲಿ ಹೇಳಬಹುದು ಅಷ್ಟೇ. ಇಲ್ಲಿನ ಜನಕ್ಕೆ ಮೊದಲಿನಿಂದಲೂ ಜೆಡಿಎಸ್ ಹಾಗೂ ದೇವೇಗೌಡರ ಮೇಲೆ ಅಭಿಮಾನ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಪೂರ್ವದ ಈ ಬಜೆಟ್‌ಗೆ ಯಾವುದೇ ಮಹತ್ವವಿಲ್ಲ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಇದೆ‌. ಮುಂದೆ ಬರುವ ಸರ್ಕಾರ ಮತ್ತೊಂದು ಬಜೆಟ್ ಘೋಷಣೆ ಮಾಡುತ್ತದೆ. ನಾನು ಈಗಾಗಲೇ ರಾಜ್ಯದ 70 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಚುನಾವಣೆ ಇರುವುದರಿಂದ ಜನರನ್ನು ಮೆಚ್ಚಿಸಲು ಜನಪ್ರಿಯ ಘೋಷಣೆ ಮಾಡ್ತಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ ಅವರ ಮಂತ್ರಿಗಳು, ಶಾಸಕರಿಗೆ ಇದು ನೀರಸ ಬಜೆಟ್ ಅನಿಸಿದೆ ಅಂತೆ. ಈ ಬಗ್ಗೆ ವಿಧಾನಸೌಧದ ಮೊಗಶಾಲೆಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ನನಗೆ ಮಾಹಿತಿ ಇದೆ. ಆದ್ದರಿಂದ ಇವತ್ತಿನ ಬಜೆಟ್‌ಗೆ ಅಂತಹ ಮಹತ್ವ ಕೊಡಲ್ಲ. ಮುಂದೆ ಜನರು ಆಯ್ಕೆ ಮಾಡುತ್ತಾರೆ. ಅದರ ಮೇಲೆ ಮುಂದಿನ ಬಜೆಟ್ ಕಾರ್ಯರೂಪಕ್ಕೆ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಇನ್ಮುಂದೆ ಚೆಂಡು ಹೂವೇ ಶಾಶ್ವತ : ಸಿ.ಟಿ ರವಿ ವ್ಯಂಗ್ಯ

BASAVARAJ BOMMAI 1

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದು ವರ್ಷದಲ್ಲಿ ಅವರು ಹಣ ಕಟ್ಟಿಲ್ಲ ಅಂದರೆ ಅದಕ್ಕೆ ಬಡ್ಡಿ ಕಟ್ಟಬೇಕಲ್ಲ. ರೈತರು ಸಾಲಗಾರರು ಆಗದ ರೀತಿಯಲ್ಲಿ ಅವರು ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಬೇಕು. ಕೇವಲ ಸಾಲ ಕೊಡುತ್ತೇವೆ ಎಂದರೆ ಆಗುತ್ತಾ? ಸಾಲ ಕೊಡುವುದು ಸರ್ಕಾರ ಅಲ್ಲ, ಡಿಸಿಸಿ ಬ್ಯಾಂಕ್ ಸಾಲ ನೀಡುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಕೊಡುವುದಿಲ್ಲ. ಕುಮಾರಸ್ವಾಮಿ‌ ಇಲ್ಲ ಅಂದಿದ್ರೆ ಹಲವು ಕಡೆ ಡಿಸಿಸಿ ಬ್ಯಾಂಕ್‌ಗಳು ಮುಚ್ಚಿಹೋಗುತ್ತಿದ್ದವು. ನಾನು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ನಾನು ಡಿಸಿಸಿ ಬ್ಯಾಂಕ್‌ಗೆ ಶಕ್ತಿ‌ ನೀಡಿದ್ದೇನೆ. ಅದರಿಂದಾನೇ ಈಗ ಬಿಜೆಪಿ ಅವರೂ ಸಾಲ ನೀಡ್ತಿನಿ ಅಂತ ಹೇಳ್ತಾ ಇರೋದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *