ಬೆಂಗಳೂರು: ಅದೃಷ್ಟದ ಮನೆಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಪಸ್ ಆಗಿದ್ದಾರೆ.
ಜೆಪಿ ನಗರದ ಮನೆಯಲ್ಲಿ ವಾಸ್ತು ಸರಿ ಇಲ್ಲ ಅಂತಾ ಬದಲಾಯಿಸೋಕೆ ಮುಂದಾಗಿದ್ರು. ಒಮ್ಮೆ ಮನೆ ಮಾರಾಟಕ್ಕೂ ಚಿಂತನೆ ಮಾಡಿದ್ರು. ಆದ್ರೆ ಮನೆ ಖಾಲಿ ಮಾಡುವಾಗ ಕರಿನಾಗರ ಹಾವು ಕಾಣಿಸಿಕೊಂಡಿತ್ತು. ಆಗ ವಾಸ್ತುದೋಷ ಸರಿಪಡಿಸಿ ಇದೇ ಮನೆಯಲ್ಲಿ ವಾಸಿಸಲು ಜ್ಯೋತಿಷಿಗಳು ಸಲಹೆ ನೀಡಿದ್ರು.
ಈಗ ಮನೆ ರಿನೋವೇಶನ್ ಮಾಡಿಸಿ, ಈಗ ಮತ್ತೆ ಗೃಹ ಪ್ರವೇಶ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಮನೆಯನ್ನ ನವೀಕರಣ ಮಾಡಲಾಗುತ್ತಿತ್ತು. ಇಂದು ಮುಂಜಾನೆಯಿಂದ ವಿಶೇಷ ಪೂಜೆ ಹೋಮಗಳು ನಡೀತಿವೆ. 2006 ರಲ್ಲಿ ಸಿಎಂ ಆಗಿದ್ದಾಗ ಇದೇ ಮನೆಯಲ್ಲಿ ಎಚ್ಡಿಕೆ ವಾಸವಿದ್ದರು.