ಸರ್ಕಾರ ಉಳಿಸಿಕೊಳ್ಳಲು ಶಾರದಾಂಬೆಗೆ ಮೊರೆ – ಶೃಂಗೇರಿಯಲ್ಲಿ ರೇವಣ್ಣರಿಂದ ಸುದರ್ಶನ ಹೋಮ

Public TV
1 Min Read
CKM HDD FAMILY

ಚಿಕ್ಕಮಗಳೂರು: ಕೈ ನಾಯಕರ ಬಂಡಾಯದ ನಡುವೆ ದೇವೇಗೌಡರ ಕುಟುಂಬ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದೆ.

ಸಚಿವ ಎಚ್.ಡಿ.ರೇವಣ್ಣ ಶೃಂಗೇರಿಯಲ್ಲಿ ಕೃತ್ತಿಮಿ ಶಕ್ತಿ ದೋಷ ಪರಿಹಾರಾರ್ಥ ಸುದರ್ಶನ ಹೋಮ ನಡೆಸಿದ್ದು, ಮೂರು ದಿನಗಳ ಹೋಮ ಕಳೆದ ರಾತ್ರಿ ಪೂರ್ಣಾಹುತಿ ಆಗಿದೆ. ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. 9 ದಿನಗಳ ಕಾಲ ನಡೆಯಲಿರುವ ಮಹಾಮಸ್ತಾಕಭಿಷೇಕ ಸಂಭ್ರಮಕ್ಕೆ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

CKM

ಧರ್ಮಸ್ಥಳದಲ್ಲಿ ಮಾತನಾಡಿದ ಸಚಿವ ರೇವಣ್ಣ, ಬಿಸಿ ಪಾಟೀಲ್ ಮುಂಬೈಗೆ ಹೋದರೆ ಏನು ಆಗುವುದಿಲ್ಲ. ಬಜೆಟ್ ಅನುಮೋದನೆ ಆಗಿಯೇ ಆಗುತ್ತದೆ. ದೇವರ ಅನುಗ್ರಹ ಸರ್ಕಾರದ ಮೇಲಿದೆ. ಕುಮಾರಸ್ವಾಮಿಯನ್ನು ಅಲುಗಾಡಿಸೋಕೆ ಆಗಲ್ಲ ಎಂದಿದ್ದರು.

ಈ ಹಿಂದೆ ದೇವೇಗೌಡರ ಕುಟುಂಬ ಅತಿರುದ್ರ ಮಹಾಯಾಗ ನಡೆಸಿದ್ದು ಬಳಿಕ ಕುಮಾರಸ್ವಾಮಿ ಸಿಎಂ ಆದ ಮೇಲೆ ಐದು ಬಾರಿ ಶೃಂಗೇರಿಗೆ ಹೋಗಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಶೂಲಿನಿ ಯಾಗ ಮಾಡಿಸಿದ್ದರು. ಇಲ್ಲಿಗೆ ಬಂದಾಗಲೆಲ್ಲ ಒಂದೊಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *