– ಪಾಪ.. ಬಿಜೆಪಿ, ಜೆಡಿಎಸ್ ಪ್ರಾಮಾಣಿಕತೆಯಿಂದ ಸರ್ಕಾರ ನಡೆಸಿದ್ರು; ಸಚಿವರ ವ್ಯಂಗ್ಯ
ಬೆಂಗಳೂರು: ಉತ್ತಮ ಆಡಳಿತ ನೀಡಬೇಕೆಂದರೆ ಜನಗಣತಿ ಆಗಬೇಕಲ್ವಾ? ಆದರೆ ಬಿಜೆಪಿ ಸಮೀಕ್ಷೆಯನ್ನೇ ನಡೆಸಿರಲಿಲ್ಲ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಹೆಚ್.ಸಿ ಮಹದೇವಪ್ಪ (H C Mahadevappa) ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದಿಂದ ಜನಗಣತಿ (Census) ಸಂಬಂಧ ಗೆಜೆಟ್ ಹೊರಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉತ್ತಮ ಆಡಳಿತ ನೀಡಬೇಕೆಂದರೆ ಜನಗಣತಿ ಆಗಬೇಕಲ್ವಾ? 10 ವರ್ಷಕ್ಕೊಮ್ಮೆ ಜನಗಣತಿ ನಡೆಸಬೇಕಿದೆ. ಕಳೆದ 2011ರಲ್ಲಿ ಜನಗಣತಿ ನಡೆದಿತ್ತು ಎಂದಿದ್ದಾರೆ. ಇದನ್ನೂ ಓದಿ: ಶಾರ್ಟ್ಕಟ್ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ್ಯಾಪಿಡೊ ಚಾಲಕ ಸುಹಾಸ್
ನಂತರ ಇಷ್ಟು ವರ್ಷಗಳಾದರೂ ಜನಗಣತಿ ನಡೆದೇ ಇರಲಿಲ್ಲ. 2 ಅವಧಿಯಿಂದಲೂ ಕೇಂದ್ರದಲ್ಲಿ ಬಿಜೆಪಿ (BJP) ಅಧಿಕಾರದಲ್ಲಿ ಇದೆ. ಆದರೂ ಸಮೀಕ್ಷೆ ನಡೆಸಿಯೇ ಇರಲಿಲ್ಲ. ಏನು ಮಾಡಬೇಕೋ ಅದನ್ನ ಮಾಡೋದೇ ಇಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಗೂಗಲ್ ಪೇ, ಫೋನ್ ಪೇ ಮತ್ತಷ್ಟು ಫಾಸ್ಟ್ – ಏನೇನು ಬದಲಾವಣೆ?
ಪ್ರಜಾಪ್ರಭುತ್ವ, ಸಂವಿಧಾನ, ಒಳ್ಳೆಯ ಆಡಳಿತ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದೆ ಇಲ್ಲ. ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಕ್ರಮ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನ ಹೆಚ್ಚಿಸಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಎಟಿಎಂ ದರೋಡೆ – 27 ಲಕ್ಷ ದೋಚಿದ ಕಳ್ಳರು
ಇನ್ನು ರಾಜ್ಯದಲ್ಲಿ 99 ದಿನಗಳಲ್ಲಿ ಹೊಸ ಸಮೀಕ್ಷೆ ಮಾಡ್ತಾರೆ. ಸಾಫ್ಟ್ವೇರ್ ಇದೆ, ದತ್ತಾಂಶಗಳಿವೆ. ಶಿಕ್ಷಕರ ಕೊರತೆ ಇದ್ರೆ, ಹೊಸ ಮಾರ್ಗ ಕಂಡುಕೊಳ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 16ನೇ ಜನಗಣತಿಗೆ ಅಧಿಸೂಚನೆ ಪ್ರಕಟ – 2026ರಲ್ಲಿ ಮೊದಲ, 2027ರ ಮಾರ್ಚ್ನಿಂದ 2ನೇ ಹಂತದ ಗಣತಿ
ಭ್ರಷ್ಟ ಸರ್ಕಾರ ಕಿತ್ತೊಗೆಯುತ್ತೇವೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಓಹೋ, ಅವರು ಬಾರೀ ಪ್ರಾಮಾಣಿಕರಾ? ಬಿಜೆಪಿ, ಜೆಡಿಎಸ್ನವರು ಬಾರೀ ಪ್ರಾಮಾಣಿಕತೆಯಿಂದ ಸರ್ಕಾರ ನಡೆಸಿದ್ದರು ಪಾಪ ಎಂದು ವ್ಯಂಗ್ಯವಾಡಿದರು. ಅಲ್ಲದೇ ಹಾಗೇನಾದ್ರೂ ಇದ್ರೆ ತನಿಖಾ ಸಂಸ್ಥೆಗಳಿವೆ. ಬೇಕಾದರೆ ದಾಖಲೆಗಳನ್ನ ಅದಕ್ಕೆ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.