ಹಾವೇರಿ: ಭಾರತೀಯ ಆಹಾರ ಪದ್ಧತಿಯಲ್ಲಿ ಆಹಾರ ಬೆಳೆ ಹಾಗೂ ದ್ವಿದಳ ಧಾನ್ಯಗಳ (Legumes) ಪಾತ್ರ ಮಹತ್ವದ್ದು. ಆದರೆ ಇತ್ತೀಚಿನ ದಿನಗಳಲ್ಲಿ ದ್ವಿದಳ ಧಾನ್ಯ ಬೆಳೆಯಲು ರೋಗಬಾಧೆ, ಅತಿವೃಷ್ಠಿ ಇಲ್ಲವೇ ಅನಾವೃಷ್ಠಿಯಿಂದಾಗಿ ಬೆಳೆ ಕಳೆದುಕೊಳ್ಳುವ ಭೀತಿಯಿಂದ ದೂರವಾಗುತ್ತಿದ್ದಾರೆ. ಆದ್ರೆ ಹಾವೇರಿ ರೈತರು (Farmers) ದ್ವಿದಳ ದಾನ್ಯ ಬೆಳೆದು ಸಕ್ಸಸ್ ಕಂಡಿದ್ದಾರೆ.
ಜಿಲ್ಲೆಯಲ್ಲಿ ಕಡಲೆ, ಹೆಸರು, ಅಲಸಂದೆ, ಹುರುಳು, ಉದ್ದು, ಅವರೆ, ಮಡಕೆ ಕಾಳುಗಳನ್ನು ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಇನ್ನು ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಔಡಲ, ಸಾಸಿವೆ, ಎಳ್ಳು, ಸೋಯಾಬಿನ್ ಮತ್ತು ಅಗಸೆಗಳನ್ನು ಬೆಳೆಯಲಾಗುತ್ತಿದೆ. ಆದರೆ ಕಳೆದ 4 ವರ್ಷಗಳಲ್ಲಿ ಈ ದ್ವಿದಳ ಧಾನ್ಯ ಬೆಳೆಗಳನ್ನ ಬೆಳೆಯುವ ಕ್ಷೇತ್ರದಲ್ಲಿ ಏರಿಳಿತ ಕಂಡು ಬರುತ್ತಿದೆ. ಈ ಸಾಲಿನಲ್ಲಿ ಆಹಾರ ಬೆಳೆಯಲ್ಲಿ ಅಥವಾ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕೇಳಿ ಬರುವ ಕಡಲೆ ಬೆಳೆ ಜಿಲ್ಲೆಯ ಹೆಚ್ಚಿನ ಕ್ಷೇತ್ರವನ್ನು ಈ ಬಾರಿ ಆವರಿಸಿದೆ. ಇದನ್ನೂ ಓದಿ: ಮತ್ತೆ ಸರ್ಕಾರ Vs ಗವರ್ನರ್; ದ್ವೇಷ ಭಾಷಣ ಮಸೂದೆಗೆ ಕೊಕ್ಕೆ – 29 ಕಾರಣ ಕೊಟ್ಟ ಗವರ್ನರ್!
ಕಡಲೆ ಬೆಳೆಯನ್ನು ಕಡಲೆ ಕಾಳು, ಪುಠಾಣಿ ಮತ್ತು ಕಡಲೆ ಹಿಟ್ಟು ಹೀಗೆ ಮೂರು ವಿಭಾಗಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಪುಠಾಣಿ ಮತ್ತು ಕಡಲೆ ಹಿಟ್ಟು ವಾಣಿಜ್ಯ ಬಳಕೆ ಅಥವಾ ಹೋಟೆಲ್ ಉದ್ಯಮದ ಜೀವನಾಡಿಯಾಗಿದೆ ಎಂದರೆ ತಪ್ಪಾಗಲಾರದು. ಇಂಥ ಕಡಲೆ ಬೆಳೆ ಪ್ರಸ್ತುತ ಜಿಲ್ಲೆಯಲ್ಲಿ ವ್ಯಾಪಕವಾಗಿ ಸೊಗಸಾಗಿ ಬೆಳೆದಿದ್ದು, ಈ ಬಾರಿ ರೈತರ ಕೈಹಿಡಿದು ಆರ್ಥಿಕವಾಗಿ ಬೆನ್ನಿಗೆ ನಿಲ್ಲುವ ಭರವಸೆ ಮೂಡಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ – ಹೆಲಿಕಾಪ್ಟರ್ ಮೂಲಕ ಏರಿಯಲ್ ಸರ್ವೆ
ಪ್ರಸ್ತುತ ಹಾವೇರಿ ತಾಲೂಕಿನಲ್ಲಿ 1,335 ಹೆಕ್ಟೇರ್, ರಾಣೆಬೆನ್ನೂರ 1,383 ಹೆಕ್ಟೇರ್, ಶಿಗ್ಗಾಂವಿ 1,400 ಹೆಕ್ಟೇರ್, ಹಿರೇಕೆರೂರ 1,680 ಹೆಕ್ಟೇರ್, ರಟ್ಟೀಹಳ್ಳಿ 358 ಹೆಕ್ಟೇರ್, ಸವಣೂರ 216 ಹೆಕ್ಟೇರ್ ಮತ್ತು ಬ್ಯಾಡಗಿಯಲ್ಲಿ 35 ಹೆಕ್ಟೇರ್ ಕಡಲೆ ಬಿತ್ತನೆಯಾಗಿದೆ. ಪ್ರತಿ ವರ್ಷದ ಬಿತ್ತನೆ ಗುರಿ 3,558 ಇದ್ದು, ಪ್ರಸ್ತುತ 4,685 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಅನ್ನದಾತರಲ್ಲಿನ ಕೊಂಚ ಬದಲಾವಣೆಗೆ ಇದು ಸಾಕ್ಷಿ ಎನಿಸಿದೆ. ಇದನ್ನೂ ಓದಿ: ಫ್ಯೂಯಲ್ ಕಂಟ್ರೋಲ್ ಸ್ವಿಚ್ನಲ್ಲಿ ದೋಷ; ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟ ಸ್ಥಗಿತ

ಪೂರಕ ವಾತಾವರಣ:
ಕಡಲೆ ಬೆಳೆಯನ್ನ ಬಹುತೇಕ ನಮ್ಮ ಜಿಲ್ಲೆಯಲ್ಲಿ ಹಿಂಗಾರು ಬೆಳೆಯಾಗಿ ಹಾಗೂ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇದನ್ನು ಜೋಳದೊಂದಿಗೆ ಮಿಶ್ರಬೆಳೆಯಾಗಿ ನೀರಾವರಿ ಕ್ಷೇತ್ರದಲ್ಲೂ ಬೆಳೆಯಲಾಗುತ್ತಿದ್ದರೂ ಜಿಲ್ಲೆಯಲ್ಲಿ ಅದರ ವ್ಯಾಪ್ತಿ ತೀರ ಕಡಿಮೆ. ನವೆಂಬರ್ ಅಂತ್ಯದಿಂದ ಜನವರಿ ಮಧ್ಯ ಭಾಗದವರೆಗೆ ಜಿಲ್ಲೆಯಲ್ಲಿ ಉಂಟಾಗುವ ವಾತಾವರಣದಲ್ಲಿನ ಆರ್ದ್ರತೆ, ಬೆಳಗಿನ ಮಂಜು ಅಥವಾ ತಂಪು ವಾತಾವರಣ ಕಡಲೆ ಬೆಳೆಗೆ ಪೂರಕವಾದುದು.
ಪ್ರಸ್ತುತ ಜಿಲ್ಲೆಯಲ್ಲಿ ಇಂಥ ವಾತಾವರಣ ಹೇರಳವಾಗಿ ಲಭಿಸಿದ್ದರಿಂದ ಮತ್ತು ಮುಂಗಾರು ಪೂರ್ವದಲ್ಲಿ ಸುರಿದ ಹೆಚ್ಚಿನ ಮಳೆಯ ಕಾರಣದಿಂದ ಈ ಬಾರಿ ಚಳಿಗಾಲ ಕೊಂಚ ಹೆಚ್ಚೆ ಚಳಿಯನ್ನು ನೀಡಿದೆ. ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಕಡಲೆಗೆ ಆಸಕ್ತಿ ವಹಿಸಿ ಬಿತ್ತನೆ ಮಾಡಿದ್ದು, ಇದೀಗ ಭರ್ಜರಿ ಫಸಲು ಕಣ್ತುಂಬಿ ಕೊಳ್ಳುವಂತಿದೆ. ಹೀಗಾಗಿ ಕಡಲೆ ಈ ಬಾರಿ ರೈತರ ಕೈಹಿಡಿಯುವುದು ನಿಶ್ಚಿತ ಎಂಬ ಭಾವನೆ ಮೂಡಿಸಿದೆ.


