ಹೈದಾರಾಬಾದ್: ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರು ಇಂದು ಆಂಧ್ರ ಪ್ರದೇಶದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಶಿವರಾಜ್ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡು ತಮ್ಮ ಪತ್ನಿ ಗೀತಾ ಅವರ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಅವರು ದೇವರಿಗೆ ಮುಡಿ ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ, ನಾವು ಯಾವಾಗಲೂ ತಿರುಪತಿಗೆ ಬರುತ್ತಿರುತ್ತೇವೆ. ಈ ದೇವಸ್ಥಾನಕ್ಕೆ ಬಂದು ಏಳು ವರ್ಷವಾಗಿತ್ತು. ದೇವರ ದರ್ಶನ ಚೆನ್ನಾಗಿ ನಡೆಯಿತು. ನನ್ನ ಪತ್ನಿ ದೇವರಿಗೆ ಎರಡನೇ ಬಾರಿ ಮುಡಿ ನೀಡಿದ್ದಾರೆ. ಇಲ್ಲಿಗೆ ಬಂದಿದ್ದು ಖುಷಿ ಆಗಿದೆ ಎಂದರು.
ಅಲ್ಲದೆ ನಮ್ಮ ತಂದೆ ಡಾ. ರಾಜ್ಕುಮಾರ್ ಅವರು ದೇವಸ್ಥಾನದಲ್ಲಿ ಲೈಫ್ ಟೈಮ್ ಮೆಂಬರ್ ಆಗಿರುವುದರಿಂದ ಅವರು ಆಗಾಗ ಬರುತ್ತಿದ್ದರು. ನಾನು ಸಿನಿಮಾ ಕೆಲಸಗಳಿಂದ ಇತ್ತೀಚೆಗೆ ಬರುವುದಕ್ಕೆ ಆಗಿರಲಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡಿದರ ಹಿಂದೆ ಬೇರೇನು ವಿಶೇಷತೆಗಳಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಾಧ್ಯಮದವರು ಮುಂಬರುವ ಚಿತ್ರದ ಬಗ್ಗೆ ಶಿವಣ್ಣ ಅವರನ್ನು ಪ್ರಶ್ನಿಸಿದ್ದಾರೆ. ಆಗ ಅವರು ನನ್ನ ಮುಂದಿನ ಸಿನಿಮಾ ‘ದ್ರೋಣ’ ಹಾಗೂ ‘ಭಜರಂಗಿ-2’ ಚಿತ್ರ ಶೂಟಿಂಗ್ ನಡೆಯುತ್ತಿದೆ ಎಂದು ಶಿವಣ್ಣ ಹೇಳಿದ್ದಾರೆ.