ಹಾಸನ: ಜಿಲ್ಲೆಯಲ್ಲಿ ಒಂಟಿ ಸಲಗದ ದಾಳಿಗೆ ಎರಡನೇ ಬಲಿಯಾಗಿದೆ. ನಾಡಿಗೆ ನುಗ್ಗಿದ್ದ ಆನೆಯನ್ನು ಕಾಡಿಗೆ ಓಡಿಸುತ್ತಿದ್ದಾಗ ಘಟನೆ ನಡೆದಿದೆ.
ಅರಣ್ಯ ಇಲಾಖೆ ವಾಚರ್ ಅಣ್ಣೇಗೌಡ (52) ಮೃತ ವ್ಯಕ್ತಿ. ಒಂಟಿ ಸಲಗವು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಹಾಸನ ನಗರಕ್ಕೆ ಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಆನೆಯನ್ನು ಸೀಗೆಗುಡ್ಡ ಅರಣ್ಯಕ್ಕೆ ಓಡಿಸಿದ್ದರು. ಈ ವೇಳೆ ಆನೆಯು ಏಕಾಏಕಿ ದಾಳಿ ಆರಂಭಿಸಿತು. ತಕ್ಷಣವೇ ಅಣ್ಣೇಗೌಡ ಅವರನ್ನು ಹೊರತು ಪಡಿಸುವಂತೆ ಏಳು ಮಂದಿ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದರು.
ಆನೆಯ ದಾಳಿಗೆ ಸಿಕ್ಕ ಅಣ್ಣೇಗೌಡ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಿಬ್ಬಂದಿಯ ಸಾವಿಗೆ ಡಿಸಿಎಫ್ ಸಿವರಾಂಬಾಬು ಕಣ್ಣೀರಿಟ್ಟಿದ್ದು, ಶೀಘ್ರವೇ ಹಂತಕ ಆನೆಯನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.