ಹಾಸನದಲ್ಲಿ ಚುನಾವಣೆ ಗೆಲ್ಲಲು ಪ್ರೀತಂಗೌಡ ರಣತಂತ್ರ- ವಿಡಿಯೋ ವೈರಲ್

Public TV
1 Min Read
PREETHAM GOWDA

ಹಾಸನ: ಬಿಜೆಪಿ ಶಾಸಕ ಪ್ರೀತಮ್ ಗೌಡ ಚುನಾವಣೆ ಗೆಲ್ಲಲು ರಣತಂತ್ರ ಹೂಡಿರುವ ವಿಡಿಯೋ ವೈರಲ್ ಆಗಿದೆ.

ಜೆಡಿಎಸ್ ಮತದಾರರ ಗಮನ ಹೇಗೆ ಸೆಳೆಯಬೇಕು ಅನ್ನೋ ವಿಚಾರದ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮಾಡಿದ ಪಾಠ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

BJP JDS

ವಿಡಿಯೋದಲ್ಲೇನಿದೆ?:
ಅವರು ಹೇಗೆ ಮಾತಾಡ್ತಾರೆ ಹಂಗೆ ಮಾತಾಡಿ. ಕೊನೆಗೆ ನಮ್ಮ ರೂಟಿಗೆ ತರಬೇಕು. ರೇವಣ್ಣನ ಭಕ್ತ ಇದ್ದರೆ ಈ ಬಾರಿ ನಮ್ಮ ಗೆಲ್ಲಿಸು ಮುಂದೇ ರೇವಣ್ಣನ ಗೆಲ್ಲಿಸ್ತಿವಿ ಎಂದು ಹೇಳಿ. ಆ ಹುಡುಗ ಎಲ್ಲರನ್ನು ಹೋಗೋ ಬಾರೋ ಅಂತಾನೆ ಅವರಿಗ್ಯಾಕೆ ಓಟ್ ಹಾಕ್ತಿರ ಎಂದು ಹೇಳಿ. ಅವನು ಈಗಲೇ ಗೌರವ ಕೊಡಲ್ಲ, ಗೆದ್ದರೆ ನೀವೆಲ್ಲಾ ಕೈ ಕಟ್ಟಿಕೊಂಡು ನಿಲ್ಲಬೇಕು. ಹೀಗಾಗಿ ಅವರನ್ನು ಸೋಲಿಸಿದ್ರೆ ಮಾತ್ರ ಅವರಿಗೆ ಭಯ ಬರೋದು. ಹಾಗೆಯೇ ನೀವು ಹೇಳಿದ್ದನ್ನು. ಅವರು ಕೇಳೋದು. ಆಗ ನಮ್ಮ ಮನೆ ಪಾತ್ರೆ ತೊಳೆಯೋ ಲಕ್ಷ್ಮಿಯನ್ನು ನಿಲ್ಲಿಸಿದ್ರೂ ಗೆಲ್ತಾರೆ ಅನ್ನೋ ಕಾನ್ಫಿಡೆಂಟ್ ಬರುತ್ತದೆ. ಈಗ ಬೂತ್ ಗೆ ಒಂದು ಲಕ್ಷ ಕೊಟ್ಟವ್ನೆ, ಎಂಪಿ ಸೋತರೆ ಎಮ್‍ಎಲ್‍ಎ ಗೆ ಐದು ಲಕ್ಷ ಕೊಡ್ತಾನೆ ಎಂದು ನೀವು ಕನ್ವಿನ್ಸ್ ಮಾಡಿ ಎಂದು ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಎ ಮಂಜು ಚುನಾವಣಾ ಕಣಕ್ಕೆ ಇಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *