ಹಾಸನ: ಪುನೀತ್ ರಾಜ್ಕುಮಾರ್ ಸಾವಿನಿಂದ ಶೋಕಸಾಗರದಲ್ಲಿ ಮುಳುಗಿರುವ ಕರುನಾಡ ಜನ ಇಂದು ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನ ಪಡೆಯಲು ಕೂಡ ಆಗಮಿಸಲಿಲ್ಲ.
ಅಕ್ಟೋಬರ್ 28 ರಂದು ಹಾಸನಾಂಬೆ ದೇವರ ದರ್ಶನ ಆರಂಭವಾಗಿದೆ. ದೇವಾಲಯದ ಭಾಗಿಲು ತೆರೆದ ನಂತರ ದೇವಿಯ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದರು. ಸರದಿ ಸಾಲಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಹಾಸನಾಂಬೆಯ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ ಪುನೀತ್ ರಾಜ್ಕುಮಾರ್ ಸಾವಿನಿಂದ ಇಡೀ ರಾಜ್ಯದ ಜನ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ
ಪುನೀತ್ ಸಾವಿನ ದುಃಖದಲ್ಲಿರುವ ಜನ ಇಂದು ನೋವಿನಿಂದ ಹಾಸನಾಂಬೆ ದರ್ಶನಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಕೇವಲ ಒಂದಷ್ಟು ಜನ ಮಾತ್ರ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದು, ಇಡೀ ರಾಜ್ಯದಲ್ಲಿ ಅಪ್ಪು ಕಳೆದುಕೊಂಡ ನೋವಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್ಗೆ ಹೇಳಿದ್ದೇನು?