ಕಾಂತಾರ (Kantara) ಸಿನಿಮಾದ ನಂತರ ರಿಷಬ್ ಶೆಟ್ಟಿ (Rishabh Shetty) ನಾನಾ ರೀತಿಯಲ್ಲಿ ಸುದ್ದಿ ಆಗುತ್ತಿದ್ದಾರೆ. ಕಾಂತಾರ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ ರಿಷಬ್ ಲಕ್ ಬದಲಾಗಿಬಿಟ್ಟಿದೆ. ಈಗ ಕೇವಲ ಅವರು ಸಿನಿಮಾ ರಂಗದಲ್ಲಿ ಮಾತ್ರ ಸುದ್ದಿ ಆಗುತ್ತಿಲ್ಲ, ರಾಜಕಾರಣದಲ್ಲೂ ಸದ್ದು ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಿಷಬ್ ಭೇಟಿ ಮಾಡಿ ಬಂದ ನಂತರ ಅವರು ರಾಜಕಾರಣಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆ ಬಲವಾಗುತ್ತಿದೆ. ಆದರೂ, ರಿಷಬ್ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. ‘ನನಗೂ ರಾಜಕಾರಣಕ್ಕೂ ಆಗಲ್ಲ. ನಾನು ಸಿನಿಮಾ ರಂಗದಲ್ಲೇ ಇರುತ್ತೇನೆ. ರಾಜಕಾರಣ ಮಾಡಲಾರೆ’ ಎಂದು ರಿಷಬ್ ಹೇಳಿದ್ದರೂ, ರಿಷಬ್ ಬಗ್ಗೆ ಗೆಳೆಯ ರಕ್ಷಿತ್ ಶೆಟ್ಟಿಗೆ (Rakshit Shetty) ನಂಬಿಕೆ ಬಂದಂತೆ ಕಾಣುತ್ತಿಲ್ಲ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ
‘ನಾನು ಆಯ್ಕೆ ಮಾಡಿಕೊಂಡ ಸಿನಿಮಾ ಕ್ಷೇತ್ರದಲ್ಲೇ ಇರುವೆ. ನಾನು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾರೆ’ ಎಂದು ರಿಷಬ್ ಬರೆದ ಬರಹಕ್ಕೆ ರಕ್ಷಿತ್ ಶೆಟ್ಟಿ ಮರು ಪ್ರಶ್ನೆ ಮಾಡಿದ್ದಾರೆ. ‘ಎಂದೂ ಹೋಗುವುದಿಲ್ಲವೆ?’ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಅನುಮಾನವೇ ಹಲವು ಅರ್ಥಗಳನ್ನು ಕೊಡುವಂತಿದೆ. ಅಂದರೆ, ರಿಷಬ್ ಮುಂದಿನ ದಿನಗಳಲ್ಲಿ ಹೋಗಬಹುದು ಎನ್ನುವ ಕುತೂಹಲವನ್ನೂ ಮೂಡಿಸಿದೆ.
ರಿಷಬ್ ಮತ್ತು ರಕ್ಷಿತ್ ಪ್ರಾಣ ಸ್ನೇಹಿತರು. ಖಂಡಿತಾ ಈ ಕುರಿತು ಅವರು ಮಾತನಾಡಿಕೊಂಡಿರುತ್ತಾರೆ. ಈ ಕಾರಣದಿಂದಲೇ ರಕ್ಷಿತ್ ಈ ರೀತಿಯಾಗಿ ಕೇಳಿರಬಹುದಾ ಎನ್ನುವ ಅನುಮಾನವೂ ಮೂಡಿದೆ. ಆದರೆ, ರಕ್ಷಿತ್ ಕೇಳಿದ ಪ್ರಶ್ನೆಗೆ ರಿಷಬ್ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎನ್ನುವುದು ಕಾದು ನೋಡಬೇಕು.