– ರೂಪದರ್ಶಿ ಕೊಲೆ ಮಾಡಿದ್ದ ಬಾಯ್ಫ್ರೆಂಡ್ ಅರೆಸ್ಟ್
ಚಂಡೀಗಢ: ಕತ್ತು ಸೀಳಿ ಖ್ಯಾತ ಮಾಡೆಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ರೂಪದರ್ಶಿಯ ಬಾಯ್ಫ್ರೆಂಡ್ನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುನಿಲ್ ಎಂದು ಗುರುತಿಸಲಾಗಿದೆ. ಮೃತ ಶೀತಲ್ ಸಂಗೀತ ಉದ್ಯಮದಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆಗೆ ಸುನಿಲ್ ಬಾಯ್ಫ್ರೆಂಡ್ ಆಗಿದ್ದ ಎನ್ನಲಾಗಿದೆ.ಇದನ್ನೂ ಓದಿ: ಕತ್ತು ಸೀಳಿ ಖ್ಯಾತ ಮಾಡೆಲ್ ಬರ್ಬರ ಹತ್ಯೆ – ಕಾಲುವೆಯಲ್ಲಿ ಶವ ಪತ್ತೆ
ಸಂತ್ರಸ್ತೆಯ ಸಹೋದರಿ ನೇಹಾ ಮಾತಾನಾಡಿ, ಶೀತಲ್ ಹಾಗೂ ನಾನು ಜೊತೆ ಪಾಣಿಪತ್ನಲ್ಲಿ ವಾಸಿಸುತ್ತಿದ್ದೆವು. ಜೂ.14ರಂದು ಶೀತಲ್ ಮಾಡೆಲ್ ಶೂಟಿಂಗ್ಗಾಗಿ ಅಹರ್ ಗ್ರಾಮಕ್ಕೆ ತೆರಳಿದ್ದರು. ಆ ಸಮಯದಲ್ಲಿ ಶೀತಲ್ ನನಗೆ ಕರೆ ಮಾಡಿ, ಸುನಿಲ್ ನನ್ನ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದ್ದಾನೆ ಹಾಗೂ ಬಲವಂತವಾಗಿ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಳು. ಸ್ವಲ್ಪ ಸಮಯದ ಬಳಿಕ ಶೀತಲ್ಗೆ ಮತ್ತೆ ಕರೆ ಮಾಡಿದಾಗ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ರಾತ್ರಿಯಾದರೂ ಮನೆಗೆ ಬರದಿದ್ದಾಗ ಕಾಣೆಯಾಗಿರುವುದಾಗಿ ದೂರು ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಆರು ತಿಂಗಳ ಹಿಂದೆ ಶೂಟಿಂಗ್ ಸಮಯದಲ್ಲಿ ಕರ್ನಾಲ್ನ ಮಾಡೆಲ್ ಟೌನ್ನಲ್ಲಿರುವ ಸುನಿಲ್ ಮಾಲೀಕತ್ವದ ಹೋಟೆಲ್ನಲ್ಲಿ ಶೀತಲ್ ತಂಗಿದ್ದಳು. ಆಗ ಶೀತಲ್ ಹಾಗೂ ಸುನಿಲ್ ಮಧ್ಯೆ ಸ್ನೇಹ ಬೆಳೆದಿತ್ತು. ಶೀತಲ್ಗೆ ಮದುವೆಯಾಗಿ ಒಂದು ಮಗು ಇತ್ತು. ಆದರೆ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಬಗ್ಗೆ ತಿಳಿದಿದ್ದರೂ ಕೂಡ ಶೀತಲ್ಗೆ ಮದುವೆಯಾಗುವಂತೆ ಸುನಿಲ್ ಕೇಳಿಕೊಂಡಿದ್ದ. ಅದಲ್ಲದೇ ಸುನಿಲ್ಗೂ ಕೂಡ ಮದುವೆಯಾಗಿ ಎರಡು ಮಕ್ಕಳಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:Thriller Stories | ಕಾಮದಾಟಕ್ಕೆ ಅಡ್ಡಿಯಾದ ಗಂಡಂದಿರನ್ನೇ ಕೊಂದವರಿವರು…
ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಶೀತಲ್, ಸುನಿಲ್ ಜೊತೆಗೆ ಮಾತನಾಡುವುದನ್ನು ಮತ್ತು ಆತನ ಹೋಟೆಲ್ನಲ್ಲಿ ಇರುವುದನ್ನು ನಿಲ್ಲಿಸಿಬಿಟ್ಟಿದ್ದಳು. ಮಾಡೆಲಿಂಗ್ನ್ನು ಕೂಡ ಕಡಿಮೆ ಮಾಡಿದ್ದಳು. ಆದರೆ ಸುನಿಲ್ ಮಾತ್ರ ಆಕೆಯ ಮನವೊಲಿಸುವ ಪ್ರಯತ್ನ ನಿಲ್ಲಿಸಿರಲಿಲ್ಲ ಎಂದು ತನಿಖೆ ವೇಖೆ ತಿಳಿದುಬಂದಿದೆ.
ದೂರಿನ ಆಧಾರದ ಮೇಲೆ ತನಿಖೆಗೆ ಇಳಿದ ಪೊಲೀಸರು, ಸೋಮವಾರ ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಮಾಡೆಲ್ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಸದ್ಯ ಪೊಲೀಸರು ಆರೋಪಿ ಸುನಿಲ್ನನ್ನು ಬಂಧಿಸಿದ್ದಾರೆ. ಆರೋಪಿಯು ಕೊಲೆ ಮಾಡಿ ಶವವನ್ನು ಕಾಲುವೆಗೆ ಎಸೆದಿದ್ದಾನೆ. ಕೊಲೆಯನ್ನು ಅಪಘಾತವೆಂದು ಬಿಂಬಿಸಲು, ತನ್ನ ಕಾರನ್ನು ಸಹ ಕಾಲುವೆಗೆ ಇಳಿಸಿದ್ದ. ಸ್ವತಃ ತಾನು ಈಜಿಕೊಂಡು ಪಾರಾಗಿದ್ದೇನೆಂದು ಬಿಂಬಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಬುರ್ಖಾ ಧರಿಸಿ ಇಂದೋರ್ ಸೇರಿದ್ದಳು ಹನಿಮೂನ್ ಹಂತಕಿ – ಮದುವೆಗೆ 11 ದಿನ ಮುನ್ನವೇ ಕೊಲೆಗೆ ಪ್ಲ್ಯಾನ್!