ಸ್ಯಾಂಡಲ್ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲೂ ಆಕ್ಟೀವ್ ಆಗಿರೋ ನಟಿ, ಈಗ ನ್ಯೂಸ್ ರಿರ್ಪೋಟರ್ ಆಗಿ ಬಣ್ಣ ಹಚ್ಚೋದಕ್ಕೆ ರೆಡಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಕೈಯಲ್ಲಿರಬೇಕಾದರೆ ಕನ್ನಡದ ಥ್ರೀಲರ್ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇದೀಗ ಬೋಜಪರಿ ಚಿತ್ರರಂಗದಲ್ಲೂ ಬ್ಯುಸಿಯಿರೋ ಹರ್ಷಿಕಾ, ಕನ್ನಡದ `ಮಾರಕಾಸ್ತç’ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನ್ಯೂಸ್ ರಿರ್ಪೋಟರ್ ಆಗಿ ಗಟ್ಟಿ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಎಲ್ಲೆ ಕ್ರೈಂ ನಡೆದರು ಅದನ್ನು ಭೇದಿಸುವ ಕ್ರೈಂ ವರದಿಗಾರ್ತಿ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.
ಗುರುಮೂರ್ತಿ ಸುನಾಮಿ ನಿರ್ದೇಶನದ ಸಸ್ಪೆನ್ಸ್ ಥ್ರಿಲರ್ ಚಿತ್ರದಲ್ಲಿ ಹೊಸ ಪ್ರತಿಭೆ ಆನಂದ್ ಆರ್ಯಗೆ ನಾಯಕಿಯಾಗಿ ಹರ್ಷಿಕಾ ಕಾಣಿಸಿಕೊಳ್ಳತ್ತಿದ್ದಾರೆ. ಕ್ರೈಂ ಪ್ರಕರಣವನ್ನು ಭೇದಿಸುವ ವರದಿಗಾರ್ತಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ನಟಿ ಹರ್ಷಿಕಾ ಕೈಯಲ್ಲಿ ಎರಡು ಬೋಜಪುರಿ ಚಿತ್ರಗಳಿದ್ದು, ತಾಯ್ತ, ಓ ಪ್ರೇಮ, ಸ್ತಬ್ಧ, ಸೂಪರ್ ಆಗಿದೆ ಲವ್ ಸ್ಟೋರಿ ಚಿತ್ರಗಳು ರಿಲೀಸ್ಗೆ ರೆಡಿಯಿದೆ. ಇದನ್ನೂ ಓದಿ: ಹೈದರಾಬಾದ್ ನಲ್ಲಿ ‘ಕೆಜಿಎಫ್ 2’ ಡೈರೆಕ್ಟರ್ ಪ್ರಶಾಂತ್ ನೀಲ್ ಗೆ ಮನೆ ಬೇಕಾಗಿದೆ
ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ತಿರೋ ಹರ್ಷಿಕಾ ನಟನೆಯ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಹರ್ಷಿಕಾ ಅಭಿನಯದ ಸಿನಿಮಾ ನೋಡಲು ಥ್ರೀಲ್ ಆಗಿದ್ದಾರೆ.