ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನದ ಜಾಗೃತಿಯನ್ನು ನಗರದ ಎನ್ಡಿಆರ್ಎಫ್ನ 10ನೇ ಬೆಟಾಲಿಯನ್ ತಂಡ ಮಾಡಿತು.
ಎನ್ಡಿಆರ್ಎಫ್ 10 ನೇ ಬೆಟಾಲಿಯನ್ನ ಸಿ ಕಂಪನಿ, ಯಲಹಂಕದ ಮಾರುತಿ ನಗರದಲ್ಲಿ ರಾಷ್ಟ್ರ ಬಾವುಟದ ಬಗ್ಗೆ ಜಾಗೃತಿ ಮೂಡಿಸಿತು. ಎನ್ಡಿಆರ್ಎಫ್ನ ಅಸಿಸ್ಟೆಂಟ್ ಕಮಂಡೆಂಟ್ ಜೆ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ ಈ ಜಾಗೃತಿ ಅಭಿಯಾನ ನಡೆಸಲಾಯಿತು. ಇದನ್ನೂ ಓದಿ: ವೆಂಟಿಲೇಟರ್ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ
ಕೋಗಿಲು ಕ್ರಾಸ್, ಯಲಹಂಕ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಾಷ್ಟ್ರ ಬಾವುಟದ ಬಗ್ಗೆ ಜಾಗೃತಿ ಮೂಡಿಸಿ, ಮನೆ, ಮನೆಯಲ್ಲಿ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ