ಮಕರ ಸಂಕ್ರಾಂತಿ ಹಬ್ಬವು ಮಾನವ ಚೈತನ್ಯ ಮತ್ತು ಜೀವನದ ಸಂತೋಷದ ಆಚರಣೆಯಾಗಿದೆ. ಕುಟುಂಬ ಮತ್ತು ಸ್ನೇಹಿತರು ಒಟ್ಟಾಗಿ ಸೇರಿ ಸಂಭ್ರಮಿಸುವ ಸಮಯವಿದು. ಈ ಹಬ್ಬದ ಸಮಯದಲ್ಲಿ, ಜನರು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಏಕೆಂದರೆ ಅದು ಮಾನವ ಪಾಪಗಳನ್ನು ತೊಳೆಯುತ್ತದೆ ಎಂಬ ನಂಬಿಕೆ ಜನರದ್ದು. ಅಲ್ಲದೇ, ರುಚಿಕರ ಊಟ ತಯಾರಿಸುತ್ತಾರೆ ಮತ್ತು ಮನೆಯ ಅಂಗಳದಲ್ಲಿ ನಿಂತು ಬಣ್ಣಬಣ್ಣ ಚಿತ್ತಾರದ ಗಾಳಿಪಟಗಳನ್ನು ಹಾರಿಸುವ ಮೂಲಕ ಒಟ್ಟಿಗೆ ಹಬ್ಬವನ್ನು ಆನಂದಿಸುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನೀವು ಶುಭ ಸಂದೇಶ ಕಳುಹಿಸಬೇಕೇ? ವಾಟ್ಸಪ್ನಲ್ಲಿ ವಿಶ್ ಮಾಡ್ಬೇಕಾ? ಇಲ್ಲಿದೆ ಹಾಗಾದ್ರೆ ಮುಂದೆ ನೋಡಿ….