ಹಾಸನ: ರಸ್ತೆ ಅಪಘಾತದಲ್ಲಿ ತಮ್ಮ ಮೃತಪಟ್ಟ ಕಾರಣ ದುಃಖವನ್ನು ತಾಳಲಾರದೆ ಅಣ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕು ಬಂಟೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಜುಲೈ 3 ರಂದು ತಮ್ಮ ಚಂದ್ರು(21) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಸೋದರನ ಅಗಲಿಕೆಯಿಂದ ಮನನೊಂದ ಅಣ್ಣ ಮಂಜುನಾಥ್(23) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- Advertisement 2
- Advertisement 3
ವಿಕಲಾಂಗರಾಗಿದ್ದ ಮಂಜುನಾಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸದ್ಯ ಇಬ್ಬರೂ ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.