ಅಪಘಾತಕ್ಕೆ ಸಹೋದರ ಬಲಿ- ದುಃಖ ತಾಳಲಾರದೆ ವಿಕಲಚೇತನ ಅಣ್ಣ ಆತ್ಮಹತ್ಯೆ

Public TV
0 Min Read
HSN SUICIDE AV 2

ಹಾಸನ: ರಸ್ತೆ ಅಪಘಾತದಲ್ಲಿ ತಮ್ಮ ಮೃತಪಟ್ಟ ಕಾರಣ ದುಃಖವನ್ನು ತಾಳಲಾರದೆ ಅಣ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕು ಬಂಟೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಜುಲೈ 3 ರಂದು ತಮ್ಮ ಚಂದ್ರು(21) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಸೋದರನ ಅಗಲಿಕೆಯಿಂದ ಮನನೊಂದ ಅಣ್ಣ ಮಂಜುನಾಥ್(23) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

HSN SUICIDE AV 1

ವಿಕಲಾಂಗರಾಗಿದ್ದ ಮಂಜುನಾಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸದ್ಯ ಇಬ್ಬರೂ ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

HSN DEAD BADY AV

Share This Article
Leave a Comment

Leave a Reply

Your email address will not be published. Required fields are marked *