ಪೋಲಿಯೋ ಬಾಧಿಸಿದರೂ ಎದೆಗುಂದಲಿಲ್ಲ – ಛಲದಲ್ಲಿ ಬದುಕು ಕಟ್ಟಿಕೊಂಡ ವಿಕಲಚೇತನ

Public TV
1 Min Read
DVG PUBLIC HERO COLLAGE

ದಾವಣಗೆರೆ: ಹುಟ್ಟಿದ 9 ತಿಂಗಳಿಗೆ ಪೊಲೀಯೋಗೆ ತುತ್ತಾಗಿದ್ದರೂ ಇಂದು 14 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆದು ದಾವಣಗೆರೆಯ ರೈತ ಎಲ್ಲರಿಗೂ ಆದರ್ಶವಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಕುಕ್ಕವಾಡ ಗ್ರಾಮದ ನಿವಾಸಿ ಚಂದ್ರಶೇಖರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಚಂದ್ರಶೇಖರ್ ಕೋಲಿನ ಸಹಾಯದಿಂದ ತೋಟದಲ್ಲಿ ಕೆಲಸ ಮಾಡುತ್ತಾರೆ. ಪೊಲೀಯೋದಿಂದ ಬಳಲುತ್ತಿದ್ದರೂ, ಯಾವುದನ್ನೂ ಲೆಕ್ಕಿಸದೆ, ಯಾರ ಹಂಗಿಗೂ ಒಳಗಾಗದೆ ತನಗಿದ್ದ 14 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆದು ಜಿಲ್ಲೆಗೆ ಆದರ್ಶ ರೈತರಾಗಿದ್ದಾರೆ.

DVG PUBLIC HERO 2

ಇವರು ಬೆಳೆದ ಅಡಿಕೆ, ಮೆಣಸು, ಸೇರಿದಂತೆ ವಿವಿಧ ಬೆಳೆಗಳಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದ ಪ್ರಶಂಸೆ ಸಂದಿದೆ. ಸಂಘ ಸಂಸ್ಥೆಗಳು ಚಂದ್ರಶೇಖರ್ ಅವರಿಗೆ ಸನ್ಮಾನ ಮಾಡಿವೆ. ಕಾಳು ಮೆಣಸು ಬೆಳೆಗಾರರ ಸಂಘ ಕಟ್ಟಿ ಮಾರುಕಟ್ಟೆಯಲ್ಲಿ ಹೇಗೆ ಲಾಭಗಳಿಸಬೇಕು ಎಂದು ರೈತರಿಗೆ ಅರಿವು ಮೂಡಿಸುತ್ತಿದ್ದಾರೆ.

ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ ತಮ್ಮಂದಿರು ಬೇರೆಯಾದರೂ, ಹೆತ್ತವರನ್ನ ಚಂದ್ರಶೇಖರ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಮಡದಿ ಮತ್ತು ಮಕ್ಕಳು ಚಂದ್ರಶೇಖರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

https://www.youtube.com/watch?v=hf8JpkAo49w

Share This Article
Leave a Comment

Leave a Reply

Your email address will not be published. Required fields are marked *