ಹಾನಗಲ್‍ನಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿ ಸೋಲಿಗೆ ಕಾರಣವೇನು..?

Public TV
2 Min Read
HANAGAL

ಹಾವೇರಿ: ಅದು 2011ರ ಸಮಯ. ಬದಲಾದ ರಾಜಕೀಯದಾಟದಲ್ಲಿ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿ ಗಾದಿಗೇರಿದ್ದರು. ಅಂದು ಡಿವಿಎಸ್ ರಾಜೀನಾಮೆಯಿಂದ ತೆರವಾಗಿದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸುನೀಲ್‍ಕುಮಾರ್ ಸೋತಿದ್ದರು. ತಮ್ಮದೇ ಕ್ಷೇತ್ರದಲ್ಲಿ ಕಮಲ ಅರಳಿಸಲು ಡಿವಿಎಸ್ ವಿಫಲರಾಗಿದ್ದರು. ಈಗ ಬೊಮ್ಮಾಯಿಗೂ ಅಂಥಾದ್ದೇ ಸನ್ನಿವೇಶ ಎದುರಾಗಿದೆ.

basavaraj bommai

ಒಂದು ವಾರಕ್ಕೂ ಹೆಚ್ಚು ಕಾಲ ಹಾನಗಲ್‍ನಲ್ಲಿ 8-10 ಸಚಿವರ ಜೊತೆ ಬೀಡುಬಿಟ್ಟಿದ್ದ ಸಿಎಂ, ಗೆಲುವಿಗೆ ಕಾರ್ಯತಂತ್ರ ರೂಪಿಸಿದರು. ಎರಡೆರಡು ಬಾರಿ ಬಿಎಸ್‍ವೈ ಅವರನ್ನು ಕರೆತಂದು ಪ್ರಚಾರ ನಡೆಸಿದ್ರೂ, ಹಾನಗಲ್ ಗೆಲ್ಲಿಸಿಕೊಳ್ಳಲು ಸಿಎಂ ವಿಫಲರಾಗಿದ್ದಾರೆ. ಮೊದಲ ಸುತ್ತಿನಲ್ಲಿಯೇ ಮುನ್ನಡೆ ಸಾಧಿಸಿದ ಶ್ರೀನಿವಾಸ್ ಮಾನೆ ಕೊನೆಯ ಸುತ್ತಿನವರೆಗೂ ಅಧಿಪತ್ಯ ಬಿಟ್ಟುಕೊಡಲಿಲ್ಲ. ಆರಂಭದಲ್ಲಿ ಮಾನೆ-ಸಜ್ಜನರ್ ನಡ್ವೆ ಕೇವಲ 50-100 ಮತಗಳ ಅಂತರ ಇತ್ತು. ನಂತರ ಇದು ಬರಬರುತ್ತಾ ಸಾವಿರಗಳಿಗೆ ಹಿಗ್ಗಿತು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

HANAGAL 1 1

ಕೊನೆಯಲ್ಲಿ 7,373 ಮತಗಳಿಂದ ಮಾನೆ ವಿಜಯದ ನಗಾರಿ ಬಾರಿಸಿದ್ರು. ಈ ಮೂಲಕ ಮೊದಲ ಪರೀಕ್ಷೆಯಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಫೇಲ್ ಆಗಿ ತೀವ್ರ ಮುಖಭಂಗ ಅನುಭವಿಸಿದರು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ರೆ, ಬಿಜೆಪಿ ನಿರಾಸೆಯ ಮಡುವಿನಲ್ಲಿ ಮುಳುಗಿದೆ. ವಿಜೇತ ಅಭ್ಯರ್ಥಿ ಶ್ರೀನಿವಾಸ್ ಮಾನೆ, ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ಇಲ್ಲಿ ಧನಬಲದ ಎದುರು ಜನಬಲ ಗೆದ್ದಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇದು ನನ್ನ ಸೋಲು, ಪಕ್ಷದ ಸೋಲು ಹೌದು. ನಿಖರ ಕಾರಣ ಗೊತ್ತಾಗ್ತಿಲ್ಲ ಎಂದು ಪರಾಜಿತ ಅಭ್ಯರ್ಥಿ ಶಿವರಾಜ ಸಜ್ಜನರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

CONGRESS 1

ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು..?
ಶ್ರೀನಿವಾಸ ಮಾನೆ ‘ಕೈ’ ಹಿಡಿದ ವೈಯಕ್ತಿಕ ಚರಿಷ್ಮಾ. ಕೋವಿಡ್ ಕಾಲದಲ್ಲಿ ಜನರ ಕಷ್ಟಕ್ಕೆ ನೆರವಾಗಿದ್ದರು. ಹೊರಗಿನವರಾದರೂ ಕ್ಷೇತ್ರದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಿದ್ದರು. ಕಳೆದ ಬಾರಿ ಮಾನೆ ಸೋತಿದ್ದರು ಎಂಬ ಅನುಕಂಪ ವರ್ಕೌಟ್ ಆಗಿರುವ ಸಾಧ್ಯತೆ. ಹಾಗೂ ‘ಬಂಡಾಯಗಾರ’ ಮನೋಹರ್ ತಹಶಿಲ್ದಾರ್ ಮನವೊಲಿಕೆ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ಗೆದ್ದಿದೆ ಎನ್ನಲಾಗುತ್ತಿದೆ.

CONGRESS

ಬಿಜೆಪಿ ಸೋಲಿಗೆ ಕಾರಣವೇನು..?
ಕೋವಿಡ್ ಸಂಕಷ್ಟ ವೇಳೆ ಕ್ಷೇತ್ರಕ್ಕೆ ಉದಾಸಿ ಕುಟುಂಬದ ನೆರವು ಸಿಗದೇ ಇದ್ದಿದ್ದು. ಶಿವರಾಜ್ ಸಜ್ಜನರ್ ಕೈ ಹಿಡಿಯದ ಲಿಂಗಾಯತ ಮತಗಳು. ಉದಾಸಿ ಬೆಂಬಲಿಗರ ತಟಸ್ಥ ಧೋರಣೆ, ಸಚಿವ ನಿರಾಣಿ ಅಸಹಕಾರ. ಕ್ಷೇತ್ರದಲ್ಲಿ ಬಿಜೆಪಿಗೆ ಎರಡನೇ ಹಂತದ ನಾಯಕರ ಕೊರತೆ. ಹಾಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಜೆಡಿಎಸ್ ವಿಫಲವಾಗಿರುವುದೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *