ರಾಮನಗರ: ಸರ್ಕಾರದ ಇ ಸ್ವತ್ತು ಸಾಫ್ಟ್ವೇರ್ಗೆ (E Swathu Software) ಕನ್ನ ಹಾಕಿ ದಾಖಲೆಗಳ ತಿದ್ದುಪಡಿ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ರಾಮನಗರದ ಸೆನ್ ಪೊಲೀಸರು (Ramanagara CEN Police) ಯಶಸ್ವಿಯಾಗಿದ್ದಾರೆ.
ಲೋಪದೋಷವುಳ್ಳ ಖಾತೆಗಳ ದಾಖಲಾತಿಗಳನ್ನು ಅಕ್ರಮ ತಿದ್ದುಪಡಿ ಮಾಡುತ್ತಿದ್ದ ಆರೋಪಿಗಳು ಸುಮಾರು 500ಕ್ಕೂ ಹೆಚ್ಚು ಇ ಸ್ವತ್ತು ದಾಖಲೆಗಳ ತಿದ್ದುಪಡಿ ಮಾಡಿದ್ದಾರೆ. ಶರತ್ (30), ನದೀಮ್ (38), ದೀಪಕ್ (27) ಬಂಧಿತ ಆರೋಪಿಗಳು. ಮಾಗಡಿ ತಾಲೂಕಿನ ನಾರಸಂದ್ರ ಗ್ರಾ.ಪಂ ಮಾಜಿ ನೌಕರ ಶರತ್ ಪ್ರಕರಣದ ಮಾಸ್ಟರ್ ಮೈಂಡ್. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ಗೆ ಟೀಂ ಇಂಡಿಯಾ ಪ್ರಕಟ- ಗಿಲ್ಗೆ ನಾಯಕ ಪಟ್ಟ
ಇ ಸ್ವತ್ತು ಸಾಫ್ಟ್ವೇರ್ನ ಲೋಪದೋಷ ಅರಿತಿದ್ದ ಶರತ್ ನಕಲಿ ಪಾಸ್ವರ್ಡ್ ಹಾಕಿ ಸಾಫ್ಟ್ವೇರ್ ಹ್ಯಾಕ್ ಮಾಡಿದ್ದಾನೆ. ಕಂಪ್ಯೂಟರ್ ರಿಪೇರಿ ಮಾಡುತ್ತಿದ್ದ ನದೀಮ್ ಹಾಗೂ ದೀಪಕ್ ಜೊತೆ ಸೇರಿ ಖಾತೆಗಳ ಅಕ್ರಮ ತಿದ್ದುಪಡಿ ಮಾಡುತ್ತಿದ್ದ ಖದೀಮ ರಾಮನಗರ, ಬೆಂಗಳೂರು, ಹಾಸನ, ತುಮಕೂರು ಜಿಲ್ಲೆಗೆ ಸೇರಿದ ಹಲವು ಗ್ರಾ.ಪಂಗಳ ದಾಖಲೆಗಳನ್ನ ತಿದ್ದುಪಡಿ ಮಾಡಿದ್ದಾನೆ. ಖಾತೆಗೆ ಯೋಗ್ಯವಲ್ಲದ ದಾಖಲೆಗಳು, ಖಾತೆ ಬದಲಾವಣೆ, ನಕಾಶೆ, ಚೆಕ್ ಬಂಧಿಗಳ ಅಕ್ರಮ ತಿದ್ದುಪಡಿ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಖದೀಮರ ಬಳಿ ವ್ಯಕ್ತಿಯೋರ್ವ ಅಕ್ರಮ ತಿದ್ದುಪಡಿ ಮಾಡಿಸಿ ಬಳಿಕ ಸಕ್ರಮಕ್ಕಾಗಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿದ್ದ. ಈ ವೇಳೆ ಇ ಸ್ವತ್ತು ಖಾತೆ ಗಮನಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಾಫ್ಟ್ವೇರ್ ಹ್ಯಾಕ್ ಮಾಡಿ ದಾಖಲಾತಿಗಳ ತಿದ್ದುಪಡಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕುದುರೆ ಜೊತೆ ಸೆಕ್ಸ್ – ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಸೈಕೋ ಅರೆಸ್ಟ್
ಈ ಬಗ್ಗೆ ಮಾಗಡಿ ತಾಲೂಕಿನ ನಾರಸಂದ್ರ ಗ್ರಾ.ಪಂ ಪಿಡಿಓ ರಾಮನಗರ ಸೈಬರ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪ್ರಕರಣದ ತನಿಖೆ ನಡೆಸಿದ ಸೆನ್ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಭಾರೀ ಮಳೆ ಎಚ್ಚರಿಕೆ – 3 ದಿನ ರೆಡ್ ಅಲರ್ಟ್