ರಾಹುಕಾಲ ನೋಡಿ ವಾಹನದಿಂದಿಳಿದ ಸಚಿವ ರೇವಣ್ಣ

Public TV
1 Min Read
blg reavanna collage copy

ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೆಳಗಾವಿಯಲ್ಲೂ ಮತ್ತೆ ರಾಹುಕಾಲ ನೋಡಿ ವಾಹನದಿಂದ ಇಳಿದಿದ್ದಾರೆ.

ಬೆಳಗಾವಿ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ರೇವಣ್ಣ ಅವರು ರಾಹುಕಾಲ ವೀಕ್ಷಿಸಿದ್ದಾರೆ. ಕಾರ್ಯಕ್ರಮ ಸ್ಥಳಕ್ಕೆ ರೇವಣ್ಣ ಬಂದರೂ ವಾಹನದಿಂದ ಇಳಿಯಲಿಲ್ಲ. ರಾಹುಕಾಲ ಮುಗಿದ ಬಳಿಕವೇ ರೇವಣ್ಣ ವಾಹನದಿಂದ ಇಳಿದಿದ್ದಾರೆ.

blg revanna rahukala

ಸಚಿವ ರೇವಣ್ಣ ಅವರು ಕಾರ್ಯಕ್ರಮಕ್ಕೆ 9.40ಕ್ಕೆ ಆಗಮಿಸಿದ್ದರು. ಆದರೆ ರಾಹುಕಾಲ ಇದ್ದ ಕಾರಣ ಅವರು 9.54 ನಿಮಿಷಕ್ಕೆ ವಾಹನದಿಂದ ಇಳಿದಿದ್ದಾರೆ. ಬೆಳಗ್ಗೆ 10 ಗಂಟೆಗೆ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ಉದ್ಘಾಟನೆ ಆಗಬೇಕಿತ್ತು.

ಸರಿಯಾದ ಸಮಯಕ್ಕೆ ಸಿಎಂ ಕುಮಾರಸ್ವಾಮಿ ಬಾರದ ಕಾರಣ ಸಚಿವ ಎಚ್.ಡಿ ರೇವಣ್ಣ ಅಭಿಯಾನ ಪ್ರಾತ್ಯಕ್ಷಿಕೆ ನೋಡಿ ಸದನಕ್ಕೆ ಮರಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *