ಬಿಗ್ಬಾಸ್ ಮನೆಯ (Bigg Boss Kannada 10) ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಗುರೂಜಿ ಆಶೀರ್ವಾದ ಸಿಕ್ಕಿದೆ. ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್ಬಾಸ್ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ. ಅವರು ಯಾರ ಯಾರ ಬಗ್ಗೆ ಏನೇನು ಹೇಳಿದ್ದಾರೆ ಎಂಬ ಅವರ ಮಾತುಗಳು ಸದ್ದು ಮಾಡುತ್ತಿದೆ. ಅದರಲ್ಲೂ ನಮ್ರತಾಗೆ ಗುರೂಜಿ ಹೇಳಿರುವ ಮಾತು ಅಭಿಮಾನಿಗಳ ಗಮನ ಸೆಳೆದಿದೆ.
ಬಿಗ್ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವರ್ತೂರು ಸಂತೋಷ್ ಅವರನ್ನು ಕರೆದು, ನೀವು ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋ ಒಂದಿದೆ. ಹಾಕಿಸಿಕೊಂಡು ಬಂದ ದಿನದಿಂದಲೇ ನೆಮ್ಮದಿ ಹೋಯ್ತು ಎಂದು ಹೇಳಿದ್ದಾರೆ. ಅದನ್ನು ವರ್ತೂರು ಒಪ್ಪಿಕೊಂಡಿದ್ದಾರೆ ಕೂಡ. ನಮ್ರತಾ ಅವರ ಬಳಿ, ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತಿದೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ನಮ್ರತಾ (Namratha Gowda) ಅವರ ಮುಖದಲ್ಲಿ ನಗುವರಳಿದೆ.
ಬಿಗ್ ಬಾಸ್ನಲ್ಲಿ (Bigg Boss) ನಮ್ರತಾ-ಸ್ನೇಹಿತ್ ಜೋಡಿ ಮೋಡಿ ಮಾಡಿತ್ತು. ನಮ್ರತಾ ಕಡೆಯಿಂದಲೂ ಸ್ನೇಹಿತ್ಗೆ ಪ್ರಪೋಸಲ್ಗೆ ಗ್ರೀನ್ ಸಿಗ್ನಲ್ ಇದೆಯಾ ಅದನ್ನು ನಮ್ರತಾ ಹೇಳಿಲ್ಲ. ದೊಡ್ಮನೆಗೆ ಬರುವ ಮುನ್ನವೇ ಹೊರಗಡೆ ನಮ್ರತಾಗೆ ಲವ್ ಇದ್ಯಾ? ಅಥವಾ ಸ್ನೇಹಿತ್ ಜೊತೆ ಪ್ರೇಮಾಂಕುರವಾಗಿದ್ಯಾ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಇದನ್ನೂ ಓದಿ:ಹೆಣ್ಣು ಮಕ್ಕಳನ್ನು ಫುಶ್ ಮಾಡಲಾಗ್ತಿದ್ಯಾ? ಮೈಕಲ್ ಆರೋಪಕ್ಕೆ ಸುದೀಪ್ ಸ್ಪಷ್ಟನೆ
ಇನ್ನೂ ಪ್ರತಾಪ್ (Drone Prathap) ಅವರಿಗೆ ಮಾತ್ರ ಸಂಕಟಪಡುವಂಥ ಭವಿಷ್ಯ ನುಡಿದಿದ್ದಾರೆ. ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಎಂದು ಖಡಕ್ಕಾಗಿ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.