Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

Cinema

ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

Public TV
Last updated: January 6, 2025 7:06 pm
Public TV
Share
3 Min Read
SHARATH
SHARE

ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿರುವ, ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ‘ಗನ್ಸ್ ಅಂಡ್ ರೋಸಸ್’. ಈ ಚಿತ್ರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ‘ಗನ್ಸ್ ಅಂಡ್ ರೋಸಸ್’ ತೆರೆ ಕಂಡಿದೆ. ವಿಶೇಷವೆಂದರೆ, ‘ಗನ್ಸ್ ಅಂಡ್ ರೋಸಸ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಶರತ್ (Sharath) ಎಂಬ ಯುವ ಕಥೆಗಾರನ ಎಂಟ್ರಿಯಾಗಿದೆ. ಬರಹಗಾರನಾಗಿ ಹುರಿಗೊಳ್ಳುತ್ತಲೇ ನಿರ್ದೇಶಕನಾಗಬೇಕೆಂಬ ಇಂಗಿತ ಹೊಂದಿರುವ ಶರತ್ ಅವರು ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

sharath 1

ಐಟಿ ವಲಯ ಸೇರಿದಂತೆ ಒಂದಷ್ಟು ಅನುಭವಗಳನ್ನು ತಮ್ಮದಾಗಿಸಿಕೊಂಡವರು ಶರತ್. ಸಿನಿಮಾ ಸೆಳೆತದಿಂದ ತಪ್ಪಿಸಿಕೊಳ್ಳಲಾರದೆ, ಖ್ಯಾತ ಸಿನಿಮಾ ಕಥೆಗಾರ ಆಗಿರುವ ನಿರ್ಮಾಪಕ ಅಜಯ್ ಕುಮಾರ್ ಅವರ ಗರಡಿ ಸೇರಿಕೊಂಡಿದ್ದ ಶರತ್, ಒಂದಷ್ಟು ವರ್ಷ ಅಲ್ಲಿಯೇ ಹುರಿಗೊಂಡಿದ್ದಾರೆ. ಕಡೆಗೂ ಅಜಯ್ ಕುಮಾರ್ (Ajay Kumar) ತಮ್ಮ ಪುತ್ರ ಅರ್ಜುನ್ (Arjun) ನಾಯಕನಾಗಿರುವ ಚೊಚ್ಚಲ ಚಿತ್ರವಾದ ‘ಗನ್ಸ್ ಅಂಡ್ ರೋಸಸ್’ಗೆ ಕಥೆ ಬರೆಯುವ ಅವಕಾಶವನ್ನು ಶರತ್‌ಗೆ ಕೊಟ್ಟಿದ್ದಾರೆ. ಹೀಗೊಂದು ಸುವರ್ಣಾವಕಾಶ ಲಭಿಸುತ್ತಲೇ ಶರತ್ ಈಗಿನ ಜನರೇಷನ್‌ನ ಹುಡುಗರನ್ನೇ ಗುರಿಯಾಗಿಸಿಕೊಂಡು, ಸಾಮಾಜಿಕ ಪಲ್ಲಟಗಳ ಭೂಮಿಕೆಯಲ್ಲಿ ಚೆಂದದ್ದೊಂದು ಕಥೆ ಸಿದ್ಧ ಪಡಿಸಿದ್ದಾರೆ.

Guns and Roses Kannada Movie Team 2

ಆ ಹಂತದಲ್ಲಿ ಸ್ಯಾಂಡಲ್‌ವುಡ್ ಸುತ್ತಾ ಡ್ರಗ್ಸ್ ಕೇಸ್ ಪಹರೆ ನಡೆಸುತ್ತಿತ್ತು. ಬಾಲಿವುಡ್ ದಿಕ್ಕಿನಲ್ಲಿ ಖ್ಯಾತ ನಟನ ಮಗ ಡ್ರಗ್ಸ್ ಕೇಸಲ್ಲಿ ಬಂಧಿಯಾಗಿದ್ದ. ಆ ಪಿಡುಗಿನ ಆಳಕ್ಕೆ ಹೊಕ್ಕು, ಅದಕ್ಕೆ ಯುವ ಜನತೆ ಈಡಾಗುತ್ತಿರುವ ಹಿಂಚುಮುಂಚಿನ ವಿದ್ಯಮಾನದ ಬಗ್ಗೆ ಪರಾಮರ್ಶೆ ನಡೆಸಿ ಈ ಕಥೆ ಹೆಣೆದಿದ್ದರಂತೆ. ಹಾಗಂತ, ಇಂಥಾದ್ದೊಂದು ಸಾಮಾಜಿಕ ಕಾಳಜಿಯ ಕಥೆಯನ್ನು ಒಂದೇ ಕೋನದಲ್ಲಿ ನೋಡಿದರೆ ಡಾಕ್ಯುಮೆಂಟರಿಯಾಗಿ ಬಿಡುತ್ತೆ. ಮನರಂಜನೆಗೆ ಕೊರತೆ ಇಲ್ಲದಂತೆ, ಕಮರ್ಶಿಯಲ್ ಹಾದಿಯಲ್ಲಿಯೇ ಒಂದಿಡೀ ಕಥೆಯನ್ನು ರೂಪಿಸೋದು ಶರತ್ ಪಾಲಿಗೆ ಸವಾಲಾಗಿತ್ತು. ಗುರುಗಳಾದ ಅಜಯ್ ಕುಮಾರ್ ಅವರ ಸಲಹೆ, ಸೂಚನೆಗಳನ್ನು ಅನುಸರಿಸಿ, ಆ ಸವಾಲನ್ನು ಸಮರ್ಥವಾಗಿ ಎದುರುಗೊಂಡ ತೃಪ್ತಿ ಶರತ್ ಅವರಲ್ಲಿದೆ.

Guns and Roses Kannada Movie Team

ಚಿತ್ರರಂಗದಲ್ಲಿ ಬರಹಗಾರರಿಗೆ ಮನ್ನಣೆಯಿಲ್ಲ ಅನ್ನೋ ಕೊರಗು ಆಗಾಗ ನಾನಾ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಬರಹಗಾರರಿಂದಷ್ಟೇ ಒಂದೊಳ್ಳೆ ಕಂಟೆಂಟ್ ಸೃಷ್ಟಿಯಾಗುತ್ತದೆ ಅನ್ನೋದು ನಿರ್ವಿವಾದ. ಈ ವಲಯದಲ್ಲಿರುವ ಅಷ್ಟೂ ಸವಾಲುಗಳನ್ನು ದಾಟಿಕೊಂಡು ಬರಹಗಾರರಾಗಿ ಗಮನ ಸೆಳೆದ ಒಂದಷ್ಟು ಮಂದಿಯಿದ್ದಾರೆ. ಮೊದಲ ಚಿತ್ರದಲ್ಲಿಯೇ ಶರತ್ ಕೂಡ ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳಿದ್ದಾವೆ. ಸಿನಿಮಾ ಅನ್ನೋದು ಪ್ರಭಾವೀ ಮಾಧ್ಯಮ. ಅದರ ಮೂಲಕ ಡ್ರಗ್ಸ್ ನಂಥಾ ಪಿಡುಗಿನ ಗಂಭೀರ ಸ್ವರೂಪವನ್ನು ಮನಗಾಣಿಸಿ, ಅದರ ಪರಿಣಾಮವನ್ನು ಹೇಳುವ ಜರೂರತ್ತು ಸದ್ಯದ ಮಟ್ಟಿಗಿದೆ. ಅಂಥಾದ್ದೊಂದು ಸಮಾಜಿಕ ಕಾಳಜಿಯ ಕಥೆ ಮುಟ್ಟಿದ್ದರಿಂದಲೇ ಶರತ್ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಅದು ಪ್ರೇಕ್ಷಕರ ವಲಯದಲ್ಲಿಯೂ ಪ್ರತಿಫಲಿಸುತ್ತಿದೆ. ಈ ಸಿನಿಮಾದ ಜೊತೆಗೆ, ಕಥೆಗಾರನಾಗಿ ಶರತ್ ಕೂಡ ಗೆಲ್ಲುವ ಭರವಸೆ ಮೂಡಿಕೊಂಡಿದೆ.

guns and roses

ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ‘ಗನ್ಸ್ ಅಂಡ್ ರೋಸಸ್’ ಜನವರಿ 3ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

TAGGED:Guns and RosesSharathಗನ್ಸ್ ಅಂಡ್ ರೋಸಸ್ಶರತ್
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Afreen Khan
Bengaluru City

ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಅಫ್ರೀನ್ ಖಾನ್

Public TV
By Public TV
2 seconds ago
vachanananda swamiji 1
Davanagere

ಮಠ ಬಿಡಲ್ಲ ಅಂತ ವಚನಾನಂದ ಶ್ರೀ ಪಟ್ಟು – ಬಿಡದಿದ್ರೆ ಎಳೆದು ಹೊರಗೆ ಹಾಕ್ತೀವಿ ಎಂದ ಟ್ರಸ್ಟಿಗಳು

Public TV
By Public TV
40 seconds ago
Cyber Crime
Crime

ಆನ್‌ಲೈನ್ ಹೂಡಿಕೆ ಮೋಸ – ನಿವೃತ್ತ ನೌಕರರಿಂದ 21.76 ಲಕ್ಷ ವಂಚನೆ

Public TV
By Public TV
36 minutes ago
Congress MLC Abdul Jabbar
Davanagere

ಯಜಮಾನರು ವೇದಿಕೆ ಮೇಲೆ ಬಿಎಸ್‌ವೈ ಪುತ್ರನನ್ನು ಗೆಲ್ಲಿಸಿ ಅಂದಾಗ ಯಾಕೆ ಕ್ರಮ ಕೈಗೊಂಡಿಲ್ಲ: ಅಮಾನತುಗೊಂಡ ಬೆನ್ನಲ್ಲೇ ಅಬ್ದುಲ್ ಜಬ್ಬರ್ ಆಕ್ರೋಶ

Public TV
By Public TV
37 minutes ago
bulldozer action on maharashtra man accused of sexually assaulting 180 minors
Crime

180 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ – ವಿಕೃತ ಕಾಮುಕನ ಮನೆಗೆ ಬುಲ್ಡೋಜರ್‌ ದಾಳಿ

Public TV
By Public TV
45 minutes ago
yogesh gowda
Bengaluru City

ಯೋಗೇಶ್ ಗೌಡ ಹತ್ಯೆ ಕೇಸ್‌ | ಮಧ್ಯಾಹ್ನ 3 ಗಂಟೆಗೆ ತೀರ್ಪು – ಆರೋಪಿಗಳ ಎದೆಯಲ್ಲಿ ಢವಢವ

Public TV
By Public TV
47 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?