ರಾಜಕಾರಣ ಬೇರೆ ವೈಯುಕ್ತಿಕ ಸಂಬಂಧ ಬೇರೆ ಮತ್ತೊಮ್ಮೆ ಸಾಬೀತು

Public TV
1 Min Read
siddaramaiah vishwanath hospital

ಬೆಂಗಳೂರು: ರಾಜಕೀಯ ಜಿದ್ದಿಗೆ ಬಿದ್ದು ಬೈದಾಡಿಕೊಂಡವರು. ಪರಸ್ಪರ ಚುನಾವಣೆಯಲ್ಲಿ ವಿರುದ್ಧ ಸ್ಪರ್ಧಿಸಿದವರು. ಒಬ್ಬರನೊಬ್ಬರು ಟೀಕಿಸಿಕೊಂಡು ದೂರಾದವರು. ಎಲ್ಲರೂ ಸಿದ್ದರಾಮಯ್ಯ ಆರೋಗ್ಯ ವಿಚಾರಣೆಗೆ ಬಂದು ರಾಜಕಾರಣ ಬೇರೆ ವೈಯುಕ್ತಿಕ ಸಂಬಂಧ ಬೇರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯರನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ವಿಶ್ವನಾಥ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

siddaramaiah munirathna somashekar byrathi basavaraj hospital

ಸಿದ್ದರಾಮಯ್ಯರನ್ನ ಚುನಾವಣೆಯಲ್ಲಿ ಸೋಲಿಸಿದ್ದ ಜಿ.ಟಿ.ದೇವೇಗೌಡ ಮುನಿಸು ಮರೆತು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರೆ ಸಿದ್ದರಾಮಯ್ಯರ ಮೇಲೆ ಮುನಿಸಿಕೊಂಡು ಪಕ್ಷ ತೊರೆದಿದ್ದ ಹೆಚ್ ವಿಶ್ವನಾಥ್ ಸಹಾ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಸಮ್ಮಿಶ್ರ ಅರ್ಕಾರ ಪತನಕ್ಕೆ ಕಾರಣರಾದ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ಸಹಾ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದರು. ಇದನ್ನೂ ಓದಿ: ಸಿಎಂ ಬಂದ್ರು ಚೇರ್ ಕೊಡ್ರಪ್ಪ: ಸಿದ್ದರಾಮಯ್ಯ

siddaramaiah gtdevegowda hospital

ರಾಜಕೀಯ ಅಖಾಡದಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಎಲ್ಲರು ಬೇಸರ ಮರೆತು ಒಗ್ಗೂಡಿದ್ದು ರಾಜಕಾರಣದಲ್ಲಿ ಯಾರು ಶಾಶ್ವತ ಶತ್ರುಗಳಲ್ಲ ಎನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ. ಗುರುವಾರ ಸಿಎಂ ಯಡಿಯೂರಪ್ಪ ಮತ್ತು ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *