ಅದ್ಧೂರಿಯಾಗಿ ನಡೆಯಿತು ಮಂಗಳೂರಿನ ಕದ್ರಿ ಜಾತ್ರಾ ಮಹೋತ್ಸವ!

Public TV
1 Min Read
kadri sri manjunath temple 2

ಮಂಗಳೂರು: ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಉತ್ಸವವು ಸಡಗರದಿಂದ ನಡೆಯಿತು.

ಉತ್ಸವ ಪ್ರಯುಕ್ತ ಕ್ಷೇತ್ರದ ಅಂಗಣದಲ್ಲಿ ವಿಶೇಷ ರಥೋತ್ಸವ ಜರಗಿತು. ದೇವಸ್ಥಾನದ ಪರಂಪರೆಯಂತೆ ಜೋಗಿ ಮಠದ ನಿರ್ಮಲಾನಂದ ಸ್ವಾಮೀಜಿ ಉತ್ಸವದ ನೇತೃತ್ವ ವಹಿಸಿದ್ದರು. ಮಂಜುನಾಥ ದೇವರನ್ನು ರಥದಲ್ಲಿ ಕೂರಿಸಿದರೆ, ಸ್ವಾಮೀಜಿ ಕುದುರೆಯಲ್ಲಿ ಕುಳಿತು ರಥೋತ್ಸವ ವೀಕ್ಷಣೆ ಮಾಡಿದರು.

kadri sri manjunath temple 1

ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಇಲ್ಲಿನ ಏಳು ಕೆರೆಗಳಲ್ಲಿ ಮಿಂದರೆ ಗಂಗೆಯಲ್ಲಿ ತೀರ್ಥ ಸ್ನಾನ ಮಾಡಿದಷ್ಟೇ ಶ್ರೇಷ್ಠ ಎಂಬ ಪ್ರತೀತಿ ಇರುವುದರಿಂದ ಕದ್ರಿ ಮಂಜುನಾಥ ಕ್ಷೇತ್ರ ತೀರ್ಥ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *