ರಾಮನಗರ: ಆಷಾಢ ಮಾಸದಲ್ಲಿ ನಡೆಯುವ ಬನ್ನಿಮಹಾಂಕಾಳಿ ಕರಗ ಮಹೋತ್ಸವದಿಂದಾಗಿ ಜಿಲ್ಲೆಯಲ್ಲಿ ಇದೀಗ ಹಬ್ಬದ ವಾತಾವರಣ ಜೋರಾಗಿದೆ.
ಆಷಾಢ ಮಾಸದ ಕರಗಗಳಲ್ಲಿ ಒಂದಾದ ಬನ್ನಿ ಮಹಾಂಕಾಳಿ ದೇವಿಯ ಕರಗಮಹೋತ್ಸವ ಬುಧವಾರ ಅದ್ಧೂರಿಯಿಂದ ಜರುಗಿದೆ. ದೇವಿಯ ಅರ್ಚಕ ಕರಗಧಾರಿ ಯೋಗೇಶ್ ಅಗ್ನಿಕೊಂಡ ಹಾಯುವ ಮೂಲಕ ಬನ್ನಿಮಹಾಂಕಾಳಿ ದೇವಿಯ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ರಾಮನಗರದ ಅಕ್ಕಪಕ್ಕದ 7 ದೇವತೆಗಳನ್ನ ಕಳೆದ ಒಂದು ವಾರದಿಂದ ನಗರದಾದ್ಯಂತ ಮೆರವಣಿಗೆ ಮಾಡಲಾಯಿತು. ಅಗ್ನಿಕೊಂಡ ನೋಡಲು ಭಕ್ತಾದಿಗಳ ಜನಸಾಗರವೇ ಹರಿದು ಬಂದಿತ್ತು. ಬುಧವಾರದಿಂದ ನಗರದೇವತೆ ಚಾಮುಂಡೇಶ್ವರಿಯ ಕರಗಮಹೋತ್ಸವ ಆರಂಭವಾಗಲಿದ್ದು, ಹಬ್ಬದ ವಾತಾವರಣ ರಾಮನಗರದಾದ್ಯಂತ ಮನೆ ಮಾಡಿದೆ.