ನವದೆಹಲಿ: ಉಕ್ರೇನ್ನಲ್ಲಿ, ರಷ್ಯಾ ಸೈನಿಕರ ಗುಂಡಿನ ದಾಳಿಗೆ ಗಾಯಗೊಂಡಿರುವ ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಉಕ್ರೇನ್ನ ರಾಜಧಾನಿ ನಗರ ಕೀವ್ನಲ್ಲಿ ರಷ್ಯಾದ ಗುಂಡಿನ ದಾಳಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಹರ್ಜೊತ್ ಸಿಂಗ್ನ ವೈದ್ಯಕೀಯ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ತಿಳಿಸಿದೆ.
ಮೊನ್ನೆ ಫೆಬ್ರವರಿ 27ರಂದು 31 ವರ್ಷದ ಹರ್ಜೊತ್ ಸಿಂಗ್ ತನ್ನಿಬ್ಬರು ಸ್ನೇಹಿತರೊಂದಿಗೆ ಪಶ್ಚಿಮ ಉಕ್ರೇನ್ನಲ್ಲಿರುವ ಎಲ್ವಿವ್ ನಗರಕ್ಕೆ ಯುದ್ಧಪೀಡಿತ ಕೀವ್ ನಗರದಿಂದ ಹೋಗಲು ಕ್ಯಾಬ್ ಹತ್ತಿದ್ದರು. ಈ ವೇಳೆ ಅವರ ಎದೆಭಾಗ ಸೇರಿದಂತೆ ದೇಹದ ಮೇಲೆ ನಾಲ್ಕು ಬುಲ್ಲೆಟ್ ಬಿದ್ದಿದೆ. ಹರ್ಜೊತ್ ಸಿಂಗ್ ದೆಹಲಿ ಮೂಲದವರು. ಈ ಘಟನೆ ಬಗ್ಗೆ ನಮಗೆ ಅರಿವಿದೆ. ನಮ್ಮ ರಾಯಭಾರಿಗಳು ಅವರ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದೇವೆ. ಕೀವ್ ನ ಆಸ್ಪತ್ರೆಯಲ್ಲಿ ಹರ್ಜೊತ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು
ಭಾರತವು ಮೊನ್ನೆ ಪೋಲೆಂಡ್ ಮೂಲಕ ಉಕ್ರೇನ್ಗೆ ಔಷಧಿಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವಿನ ಮೊದಲ ಭಾಗವನ್ನು ಕಳುಹಿಸಿದೆ. ಉಕ್ರೇನ್ನ ಗಡಿಯಲ್ಲಿ ನೆರೆದಿರುವ ಜನರಿಗೆ ಯುದ್ಧ ಪೀಡಿತ ರಾಷ್ಟ್ರದಿಂದ ನಿರ್ಗಮಿಸಲು ಸಹಾಯ ಮಾಡಲು ಭಾರತವು ನೆರವು ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು