ಬೆಂಗಳೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸೇರಿದಂತೆ ಮೀಸಲಾತಿಗಳಿಗಾಗಿ ನಡೆಯುತ್ತಿರೋ ಹೋರಾಟಗಳ ಬಗ್ಗೆ ಚರ್ಚೆ ಮಾಡಿಯೇ ತೀರ್ಮಾನ ಮಾಡೋದಾಗಿ ಕಾನೂನು ಸಚಿವ ಮಾಧುಸ್ವಾಮಿ (Minister Madhuswamy) ತಿಳಿಸಿದ್ದಾರೆ.
ವಿಧಾನಸೌಧ (Vidhanasoudha) ದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಜೊತೆ ಎರಡು ಬಾರಿ ಸಭೆಯಾಗಿದೆ. ಸಭೆಯಲ್ಲಿ ಚರ್ಚೆಯಾದ ವಿಷಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ಮೀಸಲಾತಿ ಕುರಿತು ಹೋರಾಟ ಮಾಡುವ ಅಗತ್ಯ ಇಲ್ಲ. ಆರಂಭದಲ್ಲಿ ಇರುವಾಗಲೇ ಹೋರಾಟಕ್ಕೆ ಇಳಿದರೆ ಹೇಗೆ..? ಸಂಖ್ಯೆ ಆಧಾರದ ಮೇಲೆ ಕೊಡಿ ಅಂತ ಕೇಳುವವರೂ ಇದ್ದಾರೆ. ಈ ಬಗ್ಗೆ ಚರ್ಚೆ ಮಾಡಲಾಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಯಾಂಟ್ರೋ ರವಿಯನ್ನ ಶೀಘ್ರವೇ ಬಂಧನ ಮಾಡ್ತೀವಿ – ಆರಗ ಜ್ಞಾನೇಂದ್ರ
ಕಾಲ ಕಾಲಕ್ಕೆ ಅಗತ್ಯ ಮಾಹಿತಿಗಳನ್ನ ತರಿಸಿಕೊಳ್ತಿದ್ದೇವೆ. ಶಿಫಾರಸು ಮಾಡಲು ಎಷ್ಟು ಸಭೆ ಆಗುತ್ತೆ ಅಂತ ಗೊತ್ತಿಲ್ಲ. ಎಲ್ಲರದ್ದೂ ಬೇಡಿಕೆ ಇದೆ. ಅನೇಕರು ಹಳೆಯ ಮೀಸಲಾತಿನೇ ಇರಲಿ ಅಂತಿದ್ದಾರೆ. ಇನ್ನು ಕೆಲವರು ಹೊಸದು ಬೇಕು ಅಂತಾರೆ. ಹೀಗಾಗಿ ಸುದೀರ್ಘ ಚರ್ಚೆಯ ಅವಶ್ಯಕತೆ. ಹೀಗಾಗಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಸರ್ಕಾರ ಕೈಗೊಳ್ಳಲಿದೆ ಅಂತ ತಿಳಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k