ಜೈಲುವಾಸ ಮುಗಿಸಿ ಹೊರ ಬಂದವರಿಗೆ ಗುಡ್ ನ್ಯೂಸ್!

Public TV
1 Min Read
BELLARY JAIL

ಬೆಂಗಳೂರು: ಸೆರೆವಾಸ ಮುಗಿಸಿ ಹೊರ ಬಂದ ಮಾಜಿ ಕೈದಿಗಳಿಗಿದೆ ಒಂದು ಸಿಹಿ ಸುದ್ದಿಯೊಂದು ಕಾದಿದೆ. ಅಪರಾಧಗಳನ್ನ ಮಾಡಿ ಜೈಲು (Jail) ಸೇರಿ ಸೆರೆವಾಸ ಮುಗಿಸಿ ಹೊರಗಡೆ ಬರುವಂತ ಕೈದಿಗಳಿಗೆ ನೌಕರಿ ಕೂಡಿಸಲು ವೇದಿಕೆ ಸಿದ್ಧವಾಗುತ್ತಿದೆ.

JAIL 1

ಸಜೆ ಸಮಯದಲ್ಲಿ ಜೈಲಿನಲ್ಲಿರುವಾಗ ಸೌಜನ್ಯದಿಂದ ವರ್ತನೆ ಮಾಡಿರುವ ಹಾಗೂ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಹೊರ ಬರುವ ಕೈದಿಗಳಿಗೆ ಉದ್ಯೋಗಾವಶವನ್ನ ಕಲ್ಪಿಸಿಕೊಡಲು ತಯಾರಿ ಮಾಡಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಜೈಲು ಹಿರಿಯ ಅಧಿಕಾರಿಗಳು ಪೆಟ್ರೋಲಿಯಂ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸೇರಿದಂತೆ ಎರಡು ಮೂರು ಸಂಸ್ಥೆಗಳ ಜೊತೆ ಮಾತುಕತೆ ಮಾಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗಂಟೆಗೆ 130 ಕಿಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಕಾರು – ಮಹಿಳಾ ಟೆಕ್ಕಿಗಳಿಬ್ಬರ ದುರ್ಮರಣ

PETROL BUNK

ಪೆಟ್ರೋಲ್ ಬಂಕ್ ಗಳಲ್ಲಿ ಉದ್ಯೋಗಾವಕಾಶಗಳ ಕೊಡಿಸುವ ವ್ಯವಸ್ಥೆಗೆ ತಯಾರಿ ಮಾಡಲಾಗುತ್ತಿದೆ. ಕೈದಿಗಳು ಅನ್ನೋ ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದರು ಕೂಡ ಸಮಾಜದಲ್ಲಿ ಅವರಿಗೆ ಗುರುತಿಸಿ ಕೆಲಸ (Job) ಕೊಡುವುದಿಲ್ಲ. ಹಾಗಾಗಿ ಕೆಲವರು ಮತ್ತದೇ ದಾರಿಯನ್ನ ತುಳಿಯುವ ಕೆಲಸಗಳು ನಡೆಯುತ್ತಿದೆ. ಆ ಒಂದು ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಹೊರ ಬಂದವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾಯಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *