ಮಂಡ್ಯ: ಲೋಕಸಭಾ ಚುನಾವಣೆ (Loksabha Election 2024) ಹೊಸ್ತಿಲಲ್ಲಿಯೇ ಸಂಸದೆ ಸುಮಲತಾಗೆ ಶಕ್ತಿ ದೇವಿಯಿಂದ ಶುಭ ಸೂಚನೆ ಸಿಕ್ಕಿದೆ.
ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬ ದೇಗುಲದಲ್ಲಿ (Nimishambha Temple) ಸುಮಲತಾ ಅಂಬರೀಶ್ ಅವರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುತ್ತಿರುವಾಗ ದೇವಿಯು ಬಲಭಾಗದಲ್ಲಿ ಹೂ ನೀಡುವ ಮೂಲಕ ಶುಭ ಸೂಚನೆ ನೀಡಿದ್ದಾಳೆ.
ದೇವಿ ಬಲಗಡೆ ಹೂ ನೀಡಿದ್ರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ದೇವಿಯ ಶುಭ ಸೂಚನೆಯಿಂದ ಸುಮಲತಾ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!
ನಿಮಿಷಾಂಬ ದೇಗುಲಕ್ಕೆ ಬಂದ್ರೆ ಒಂದು ವೈಬ್ರೇಷನ್ ಬರುತ್ತದೆ. ನನಗೋಸ್ಕರ ಅಂತ ನಾನು ಯಾವತ್ತೂ ಕೇಳಿಕೊಳ್ಳಲ್ಲ. ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಇವತ್ತು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದು ಸಂಸದೆ ಹೇಳಿದರು.