ಬೆಳಗಾವಿ: ದೇವರು ಮಾತನಾಡಲಿಲ್ಲ ಎಂದು ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ಹತ್ತಾರು ವರ್ಷಗಳ ಬಳಿಕ ಜನ ಹೋಮ ಹವನ ಮಾಡಿಸಿದ್ದಾರೆ. ಆದರೆ ಈ ವೇಳೆ ಅಗ್ನಿ ಕುಂಡದಲ್ಲಿ ಮಗುವಿನ ಆಕಾರವೊಂದು ಪ್ರತಕ್ಷವಾಗಿದೆ. ಇದು ವಿಸ್ಮಯವೋ ಪವಾಡವೋ ಗೊತ್ತಿಲ್ಲ ಜನ ಮಾತ್ರ ವಿಡಿಯೋ ನೋಡಿ ಅಶ್ಚರ್ಯಗೊಳಗಾಗಿದ್ದಾರೆ.
ಈ ವಿಸ್ಮಯ ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ನಡೆದಿದೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ ಎಂದು ಭಕ್ತಿಪರವಶರಾಗಿದ್ದಾರೆ. 11 ದಿನಗಳ ಅಗ್ನಿ ಪೂಜೆಯ ನಂತರ ಕಡೆ ದಿನ ಈ ಘಟನೆ ನಡೆದಿದೆ. ಇದನ್ನೂ ಓದಿ:
ಇದು ನಂಬಿಕೆಯೋ ಅಥವಾ ಮುಢ ನಂಬಿಕೆಯೋ ಗೊತ್ತಿಲ್ಲ ಆದರೆ ಮುಗ್ಧ ಮಗುವಿನ ಆಕಾರದಲ್ಲಿರುವ ದೃಶ್ಯಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ. ಇನ್ನು ಮುಂದೆ ನಮ್ಮ ಕಷ್ಟ ಕಾರ್ಪಣ್ಯಗಳು ಎಲ್ಲವೂ ದೂರಾಗುತ್ತವೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಪೂಜೆಗೆ ಸನ್ನಿಧೀವಹಿಸಿದ ಭೂತರಾಮನಹಟ್ಟಿ ಶ್ರೀಗಳು ಆಶ್ಚರ್ಯ ಚಕಿತರಾಗಿದ್ದಾರೆ. ಇದನ್ನೂ ಓದಿ: ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv