ಬೆಂಗಳೂರು: 13 ವರ್ಷದ ಬಾಲಕಿಯ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲವರ್ದನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಚಂದನಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವನ್ನಪ್ಪಿದ್ದಾಳೆ. ಆದರೆ ಬಾಲಕಿಯ ತಂದೆಗೆ ಬೆದರಿಕೆ ಹಾಕಿರುವ ರೀತಿಯ ಪತ್ರ ದೊರೆತಿದೆ. ಇದು ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮಿಸ್ಟರ್ ವಾಸುದೇವ್, ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದ್ದೇನೆ. ನಿನ್ನ ಮಗ ನನಗೆ ಸಿಕ್ಕಿದ್ದು ಜಸ್ಟ್ ಮಿಸ್ ಆಗಿದ್ದು ಅವನನ್ನು ಬಿಡುವುದಿಲ್ಲ ಎಂದು ಪತ್ರದಲ್ಲಿ ಸವಾಲ್ ಹಾಕಲಾಗಿದೆ. ನಿನ್ನ ಇನ್ನಿಬ್ಬರು ಮಕ್ಕಳನ್ನೂ ನಾನು ಬಿಡಲ್ಲ ಅಂತಾ ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಬರೆದಿದ್ದಾರೆ.