ದಾವಣಗೆರೆ: ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಕ್ಕೆ ಯುವತಿಯೊಬ್ಬಳು ಬಸ್ ನಿಲ್ದಾಣದಲ್ಲಿಯೇ ಯುವಕನಿಗೆ ಚಳಿ ಬಿಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯುವತಿ ಹೊನ್ನಾಳಿ ತಾಲೂಕಿನ ತಿಮ್ಮನಕಟ್ಟೆ ಗ್ರಾಮದ ನಿವಾಸಿ ಆಗಿದ್ದು, ಆಕೆ ಯುವಕನಿಗೆ ಚಳಿ ಬಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಯುವತಿಯ ಹೆಸರು ಇನ್ನೂ ಪತ್ತೆಯಾಗಿಲ್ಲ.
ವಿಡಿಯೋದಲ್ಲಿ ಯುವತಿ ನನ್ನ ತಂಗಿ ಜೀವನ ಹಾಳು ಮಾಡಿದೆ. ನನ್ನ ಅಣ್ಣ ಕೊಲೆ ಮಾಡಿದೆ ಎಂದು ಆಕ್ರೋಶಗೊಂಡು ಯುವಕನ ಮೇಲೆ ಹಲ್ಲೆ ಮಾಡಿದ್ದಾಳೆ. ತೀವ್ರ ಆಕ್ರೋಶಗೊಂಡ ಯುವತಿ ಅರ್ಧ ಗಂಟೆಗಳ ಕಾಲ ಯುವಕನಿಗೆ ಧರ್ಮದೇಟು ನೀಡಿದ್ದಾಳೆ.
ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡದೇ ಹೊರಟು ಹೋಗಿದ್ದಾಳೆ.