ಬೆಂಗಳೂರು: ಇದೀಗ ರವಿ ಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರದತ್ತ ಪ್ರೇಕ್ಷಕರೆಲ್ಲ ಆಕರ್ಷಿತರಾಗಿದ್ದಾರೆ. ಟ್ರೈಲರ್, ಹಾಡುಗಳ, ಪೋಸ್ಟರ್ ಸೇರಿದಂತೆ ಪ್ರತಿಯೊಂದಕ್ಕೂ ಸಕಾರಾತ್ಮಕ ಸ್ಪಂದನೆಯೇ ಸಿಗುತ್ತಿದೆ. ಈ ಖುಷಿಯ ನಡುವಲ್ಲಿಯೂ ದುಃಖದ ಮಡುವಿಗೆ ಕೆಡಹುವಂಥಾ ಬೇಸರವೊಂದು ಗಿರ್ ಗಿಟ್ಲೆ ಚಿತ್ರತಂಡವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ.
ಅದಕ್ಕೆ ಕಾರಣವಾಗಿರೋದು ಮಾಸ್ತಿ ಗುಡಿ ದುರಂತದಲ್ಲಿ ಮರೆಯಾದ ಯುವ ನಟ ಉದಯ್. ಯಾಕೆಂದರೆ, ಗಿರ್ ಗಿಟ್ಲೆ ಸಿನಿಮಾದಲ್ಲಿಯೂ ಕೂಡಾ ಉದಯ್ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದು ಉದಯ್ ಪಾಲಿನ ಕಡೆಯ ಚಿತ್ರವೂ ಹೌದು. ಇದನ್ನೂ ಓದಿ: ಅಗ್ನಿಸಾಕ್ಷಿ ಸುಂದರಿಯ ಗಿರ್ ಗಿಟ್ಲೆ!
ಉದಯ್ ಅಪಾರವಾದ ಸಿನಿಮಾ ಪ್ರೀತಿ ಹೊಂದಿದ್ದ ನಟ. ಯಾವುದೇ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕರೂ ತನ್ನ ಪಾತ್ರಕ್ಕೆ ಜೀವ ತುಂಬಿ ಹೊರಟು ಬಿಡೋದು ಅವರ ಜಾಯಮಾನವಾಗಿರಲಿಲ್ಲ. ಇಡೀ ಚಿತ್ರ ತಂಡದೊಂದಿಗೆ ಬೆರೆತು ಹೋಗುತ್ತಿದ್ದರು. ಗಿರ್ ಗಿಟ್ಲೆ ಚಿತ್ರ ಕೂಡಾ ಅದಕ್ಕೆ ಹೊರತಾಗಿರಲಿಲ್ಲ. ಇದನ್ನೂ ಓದಿ: ಗಿರ್ ಗಿಟ್ಲೆ: ರಂಗಾಯಣ ರಘು ಪಾತ್ರದ ರಂಪ ರಾಮಾಯಣ!
ಈ ಚಿತ್ರದ ಕಥೆಯನ್ನು ಕೇಳಿ ಥ್ರಿಲ್ ಆಗಿಯೇ ಉದಯ್ ನಟಿಸಲು ಒಪ್ಪಿಕೊಂಡಿದ್ದರಂತೆ. ಅವರ ಪಾತ್ರವಂತೂ ಅವರಿಗೇ ಹಿಡಿಸಿ ಹೋಗಿತ್ತು. ಬಹುಶಃ ಉದಯ್ ಬದುಕಿದ್ದಿದ್ದರೆ ಅವರ ವೃತ್ತಿ ಬದುಕಿಗೆ ಬೇರೆಯದ್ದೇ ದಿಕ್ಕು ತೋರಿಸುವಂತೆ ಗಿರ್ ಗಿಟ್ಲೆಯಲ್ಲಿ ಉದಯ್ ಪಾತ್ರವಿದೆಯಂತೆ. ಅದರಲ್ಲಿ ಉದಯ್ ಅದ್ಭುತವಾಗಿಯೇ ನಟಿಸಿದ್ದರು. ಇದೀಗ ಹಲವಾರು ಅಡೆತಡೆಗಳಾಚೆಗೂ ಗಿರ್ ಗಿಟ್ಲೆ ಬಿಡುಗಡೆಗೆ ರೆಡಿಯಾಗಿದೆ. ಈ ಕ್ಷಣದಲ್ಲಿ ಉದಯ್ ಬದುಕಿರ ಬೇಕಿತ್ತೆಂಬ ಆಸೆ ಕೊರಗು ಭಾವನೆ ಚಿತ್ರತಂಡವನ್ನು ಕಾಡುತ್ತಿದೆ. ಇದನ್ನೂ ಓದಿ: ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv