ಬೆಂಗಳೂರು: ಫೆಬ್ರವರಿ ತಿಂಗಳಿನಿಂದ ಜನರ ಜೀವಕ್ಕೆ ಅಪಾಯವೆಸಗುವ “ದಿ ಮೋಸ್ಟ್ ಡೇಂಜರಸ್ ಸೂರ್ಯ ಶಿಕಾರಿ” ಎಲ್ಲರನ್ನೂ ಕಾಡಲಿದೆ. ಏಕೆಂದರೆ ಎರಡೆರಡು ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಹೀಟ್ ವೇವ್ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಜನವರಿ ಅಂತ್ಯದ ಬಿಸಿಲು ಭರ್ತಿ 150 ವರ್ಷದ ಇತಿಹಾಸವನ್ನು ಪುಡಿಗಟ್ಟಿತ್ತು. ಜನವರಿಯ ಬಿಸಿಲು 150 ವರ್ಷದಲ್ಲಿಯೇ ದಾಖಲೆಯ ಬಿಸಿಲು. ಇನ್ನು ಸಣ್ಣಗೆ ಚಳಿ ಇರಬೇಕಾಗಿದ್ದ ಫೆಬ್ರವರಿಯಲ್ಲಿ ಸೂರ್ಯನ ಬಿಸಿಲು ನೆತ್ತಿ ಸುಡುತ್ತಿದೆ. ಜನ ಈಗಲೇ ಬೆವರು ಒರೆಕೊಳ್ಳುವಂತಾಗಿದೆ.
ಈ ಬಾರಿ ನಿಮಗೆ ಸೂರ್ಯ ನರಕ ದರ್ಶನ ಮಾಡಿಸಲಿದ್ದಾನೆ ಎನ್ನಲಾಗಿದೆ. ಹಾಗಂತ ಬೇಸಿಗೆ ಯುದ್ಧಕ್ಕೂ ಬಿಸಿಲ ಬೇಗೆ ಇರಲ್ಲ. ಬದಲಾಗಿ ಒಂದೊಂದು ದಿನ ಒಂದೊಂದು ರೀತಿಯ ವಾತಾವರಣ ಕಂಡು ಬರಲಿದೆ ಎಂದು ಹೇಳಲಾಗುತ್ತಿದ್ದು, ಇದು ವಿಜ್ಞಾನಿಗಳನ್ನೇ ಆತಂಕಕ್ಕೀಡು ಮಾಡಿದೆ. ಒಂದು ದಿನ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಬಿಸಿಲು ಬೆಂಗಳೂರು ಸೇರಿದಂತೆ ಇಡೀ ಕರುನಾಡನ್ನು ಕಾಡಲಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಪಿಲಿಫೈನ್ಸ್, ನ್ಯೂಜಿಲ್ಯಾಂಡ್, ಸುಮಾತ್ರ ಹೀಗೆ ನಾನಾ ಕಡೆ ಈ ಬಾರಿ ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟವಾಗುತ್ತಿದೆ. ಈ ಸ್ಫೋಟದ ತೀವ್ರತೆಯ ಪರಿಣಾಮ ಅದ್ಯಾವ ಪರಿ ಇರುತ್ತೆ ಎಂದರೆ, ಇಡೀ ಬೇಸಿಗೆಯನ್ನು ಜನರ ಪಾಲಿಗೆ ನರಕವನ್ನಾಗಿಸುತ್ತೆ ಎನ್ನಲಾಗಿದೆ. ಒಂದಿನ ಅಸಾಧ್ಯ ಎನ್ನುವ ಬಿಸಿಲು, ಇನ್ನೊಂದು ದಿನ ಚಳಿ, ಇದರಿಂದ ಕಾಯಿಲೆಗಳು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಆಕಾಶ ಚುಂಬಿಸುವಂತೆ ಭೂಮಿಯಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವುದರಿಂದ ಕಪ್ಪು ಅನಿಲ ವಿಷ ಅನಿಲವನ್ನು ಹೊರ ಸೂಸುತ್ತಿದೆ. ಹೀಗಾಗಿ ರಣಭೀಕರ ಕಾಯಿಲೆಗಳು ಬರಲಿದೆ ಎಂದು ಭೂಗರ್ಭ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.