ಚಿಕ್ಕಮಗಳೂರು: ಬೇರೆ ಪಕ್ಷ ಅಧಿಕಾರಕ್ಕೆ ಬಂದ್ರೆ ಜೆಡಿಎಸ್ ಶಾಸಕರು ಅವರ ಮನೆ ಮುಂದೆ ನಿಲ್ಲುವಂತಹ ಸ್ಥಿತಿ ಬರುತ್ತೆ, ಆಗ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತೆ ಅದಕ್ಕೆ ಜೆಡಿಎಸ್ಗೆ ಮತ ನೀಡಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಹೇಳಿದ್ರು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಹೋಬಳಿಯಲ್ಲಿ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪರ ಮತಯಾಚಿಸಿದ ಅವರು, ಜೆಡಿಎಸ್ ರೈತ ಪರ ಸರ್ಕಾರ, ಕುಮಾರಸ್ವಾಮಿಯ ಜನಪರ ಯೋಜನೆಗಳು ಜಾರಿಗೆ ಬರಬೇಕಾದ್ರೆ ಅವರು ಸಿಎಂ ಆಗಬೇಕು. ಆದ್ದರಿಂದ ಜೆಡಿಎಸ್ಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಇದೇ ವೇಳೆ, ಮಾತನಾಡಿದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ದೇಶದ ಪ್ರಧಾನಿ ಕೂಡ ಇದು 10 ಪರ್ಸೆಂಟ್ ಸರ್ಕಾರ ಅಂತಾರೆ. ಅವರು ಓರ್ವ ಪ್ರಧಾನಿ ಹಗುರವಾಗಿ ಮಾತನಾಡಲು ಆಗುವುದಿಲ್ಲ. ಅವರಿಗಿರುವ ಮಾಹಿತಿಯನ್ನ ಆಧರಿಸಿ ಮಾತನಾಡಿರಬಹುದು ಎಂದು ಬಿಜೆಪಿ ಪರ ಮೃದು ಧೋರಣೆ ತಾಳಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.